Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿನ್ನು ಶಿವ ಡಂಗುರ’ ಎಂಬ ಹೆಡ್‌ಲೈನ್‌ : ವಿಶ್ವವಾಣಿ ಪತ್ರಿಕೆ ವಿರುದ್ಧ ಆಕ್ರೋಶ 

Advertisement

ಬೆಂಗಳೂರು : ನಿನ್ನೆಯಷ್ಟೇ ( ಜೂನ್ 3 ) ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. 

ಈ ಮೂಲಕ ಹಲವು ದಿನಗಳಿಂದ ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಇಟ್ಟುಕೊಂಡಿದ್ದ ಡಿಕೆ ಅಭಿಮಾನಿಗಳು ಸಂಭ್ರಮಿಸಿದರು.

ಇನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದರ ಕುರಿತು ಸ್ಥಳೀಯ ಮಾಧ್ಯಮಗಳಿಂದ ಹಿಡಿದು ರಾಷ್ಟ್ರೀಯ ಮಾಧ್ಯಮಗಳವರೆಗೆ ಸುದ್ದಿ ಮಾಡಲಾಯಿತು.

ಅದರಂತೆ ಕನ್ನಡದ ಪ್ರಸಿದ್ಧ ದಿನಪತ್ರಿಕೆಯಾದ ವಿಶ್ವವಾಣಿ ಸಹ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕುರಿತು ವಿವರವಾಗಿ ಸುದ್ದಿ ಮಾಡಿತ್ತು.

ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಹಲವು ಬಾರಿ ಹಂಚಿಕೊಂಡಂತೆ ಈ ಬಾರಿಯೂ ಸಹ ತಮ್ಮ ಪತ್ರಿಕೆಯ ಮುಖಪುಟದ ಬಗ್ಗೆ ಫೋಟೊ ಹಂಚಿಕೊಂಡರು. 

ಫ್ರಂಟ್ ಪೇಜ್‌ನಲ್ಲಿ ‘ರಾಜ್ಯದಲ್ಲಿನ್ನು ಶಿವ ಡಂಗುರ’ ಎಂಬ ಹೆಡ್‌ಲೈನ್‌ ಅಡಿಯಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಇದನ್ನು ಕಂಡು ಹಲವಾರು ಶಿವಭಕ್ತರು ಹಿಂದೂ ದೇವರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಈ ಹೆಡ್‌ಲೈನ್ ಪಕ್ಕದಲ್ಲಿ ಶಿವ ದೇವರ ದೇಹಕ್ಕೆ ಡಿಕೆ ಶಿವಕುಮಾರ್ ಫೋಟೊ ಹಾಕಲಾಗಿದ್ದು, ಇದು ಭಕ್ತರನ್ನು ಕೆರಳಿಸಿದೆ. 

ಈ ಟ್ವೀಟ್ ಹಾಗೂ ಫೋಟೊವನ್ನು ಸಾಮಾಜಿಕ ಜಾಲತಾಣದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿರುವ ಭಕ್ತರು ಇದೇನಾ ಪತ್ರಿಕೋದ್ಯಮ, ಇದೇನಾ ಪತ್ರಿಕಾ ಸ್ವಾತಂತ್ರ್ಯ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಇದನ್ನು ಡಿಕೆಗೆ ಹಿಡಿಯಲಾದ ಬಕೆಟ್ ಎಂದು ಕಾಲೆಳೆದಿದ್ದಾರೆ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನ್ ತಂಡಕ್ಕೆ ೧೫೮ ರನ್‌ಗಳ ಟಾರ್ಗೆಟ್ಚುಟುಕು ಕ್ರಿಕೆಟ್‌ಗೆ ಶ್ರೇಯಸ್ ಅಯ್ಯರ ನಾಯಕ?ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಕೈ ತಪ್ಪಿದಲ್ಲ ಅದು ಮೊದಲೇ ಕ್ಲಿಯರ್ ಆಗಿತ್ತು : ಸತೀಶ್ ಜಾರಕಿಹೊಳಿ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ : ಸಭೆಯಿಂದ ಹೊರ ನಡೆದ ರಾಮಲಿಂಗಾರೆಡ್ಡಿ ಕಡೇಹಳ್ಳಿ ಗುಡ್ಡದ ಸಮುದಾಯ ಭವನ ಕಾಮಗಾರಿಗೆ 10 ಲಕ್ಷ ರೂ ಅನುದಾನ ಒದಗಿಸಿದ ಶಾಸಕ ಎಂ.ಟಿ.ಕೃಷ್ಣಪ್ಪಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಮತದಾರರು ಸಹಕರಿಸಿ : ಮಂಜುನಾಥ್ಸಕಾರಾತ್ಮಕ ಚಿಂತನೆ ಸಾಧನೆಗೆ ಮೆಟ್ಟಿಲು : ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿಕೆಕಲಾದಗಿಯ 1997 - 98 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಝರಾಕ್ಸ್ ಮಷೀನ್ ಕಾಣಿಕೆಯೋಜನೆಗಳನ್ನು ಕಟ್ಟಕಡೆಯ ಜನರಿಗೂ ತಲುಪಿಸಿ : ಅಧಿಕಾರಿಗಳಿಗೆ ಡಿ.ಕೆ.ಶಿ ಖಡಕ್ ಸೂಚನೆಕಠಿಣ ಯೋಗಾಸನಗಳನ್ನು ಮಾಡಿದ 9 ತಿಂಗಳ ಗರ್ಭಿಣಿ