Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಕ್ಕುಗಳ ಮೇಲೆ ಅತಿಯಾದ ಪ್ರೀತಿ : ಇಬ್ಬರು ಯುವತಿಯರು ಆತ್ಮಹತ್ಯೆ

Advertisement
ತೆಲಂಗಾಣದ ರಾಜಧಾನಿಯಲ್ಲಿ ಬೆಕ್ಕಿನ ವಿಷಯವಾಗಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವತಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಂದು ಕಡೆ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಬೆಕ್ಕು ಸಾವನ್ನಪ್ಪಿದ್ದನ್ನು ಸಹಿಸಲಾರದೆ ಯುವತಿಯೊಬ್ಬಳು ವಿಷ ಸೇವಿಸಿದರೆ, ಮತ್ತೊಂದೆಡೆ ಬೆಕ್ಕನ್ನು ಮನೆಗೆ ತರಬೇಡ ಎಂದು ತಾಯಿ ಮಂದಲಿಸಿದ್ದಕ್ಕೆ ಮನನೊಂದ ಎಂಬಿಬಿಎಸ್ (MBBS) ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.

ಸಾಕುಪ್ರಾಣಿಗಳ ಮೇಲಿನ ಅತಿರೇಕದ ಪ್ರೀತಿ ಮತ್ತು ಭಾವನಾತ್ಮಕ ಅಸ್ಥಿರತೆ ಹೇಗೆ ಒಂದು ಬದುಕನ್ನೇ ಕಸಿದುಕೊಳ್ಳಬಹುದು ಎಂಬುದಕ್ಕೆ ಈ ಘಟನೆಗಳು ಕನ್ನಡಿ ಹಿಡಿದಿವೆ.

ಅನೇಕರು ಪ್ರೀತಿಯಿಂದ ಸಾಕುವ ಸಾಕುಪ್ರಾಣಿಗಳೇ ಇಂದು ಅವರ ಪ್ರಾಣ ಕಳೆದುಕೊಳ್ಳಲು ಕಾರಣವಾಗುತ್ತಿವೆ. ಹೌದು, ತೆಲಂಗಾಣದಲ್ಲಿ ಬೆಕ್ಕುಗಳ ಕಾರಣದಿಂದಾಗಿ ಇಬ್ಬರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ.

ತಾನು ಇಷ್ಟಪಟ್ಟು ಸಾಕಿದ್ದ ಬೆಕ್ಕು ಮೃತಪಟ್ಟಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ, ಹೈದರಾಬಾದ್‌ನಲ್ಲಿ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಕ್ಕನ್ನು ಮನೆಗೆ ತರಬೇಡ ಎಂದಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆ 1) ಬೆಕ್ಕನ್ನು ಮನೆಗೆ ತರಬೇಡ ಎಂದಿದ್ದಕ್ಕೆ ಆತ್ಮಹತ್ಯೆ

ಹೈದರಾಬಾದ್‌ನ ಅಲ್ವಾಲ್ ನಿವಾಸಿಗಳಾದ ಕುಸುಮಲತಾ ಮತ್ತು ದೇವದತ್ತಂ ದಂಪತಿಯ ಪುತ್ರಿ ಶ್ರೇಷ್ಠಾ ಪ್ರಸ್ತುತ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದರು. ಮನೆಯಲ್ಲಿ ಸಾಕುತ್ತಿದ್ದ ಬೆಕ್ಕಿನ ವಿಷಯವಾಗಿ ಶುಕ್ರವಾರ ಶ್ರೇಷ್ಠಾ ಮತ್ತು ಆಕೆಯ ತಾಯಿಯ ನಡುವೆ ವಾಗ್ವಾದ ನಡೆದಿತ್ತು. ಬೆಕ್ಕನ್ನು ಮನೆಗೆ ತರಬೇಡ ಎಂದು ತಾಯಿ ಮಂದಲಿಸಿದ್ದರು.

ಇದರಿಂದ ತೀವ್ರ ಮನನೊಂದ ಶ್ರೇಷ್ಠಾ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಫ್ಯಾನಿಗೆ ನೇಣು ಹಾಕಿಕೊಂಡಿರುವುದನ್ನು ಕಂಡ ಪೋಷಕರು ಕಣ್ಣೀರು ಹಾಕಿದ್ದಾರೆ.

ಪಿಜಿ (PG) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸಣ್ಣ ವಿಚಾರಕ್ಕೆ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ.

ಘಟನೆ 2) ಸಾಕಿದ ಬೆಕ್ಕುಸತ್ತಿದ್ದಕ್ಕೆ ಆತ್ಮಹತ್ಯೆ

ಇದೇ ರೀತಿಯ ಮತ್ತೊಂದು ಘಟನೆ ಮೂರು ದಿನಗಳ ಹಿಂದೆ ಮೀರ್‌ಪೇಟೆಯಲ್ಲಿ ನಡೆದಿದೆ. ತಾನು ಪ್ರೀತಿಯಿಂದ ಸಾಕಿದ್ದ ಬೆಕ್ಕು ಮೃತಪಟ್ಟಿದ್ದನ್ನು ತಡೆಯಲಾಗದೆ ಹಿಮಬಂದು ಎಂಬ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ಎರಡು ವರ್ಷಗಳಿಂದ ಈ ಬೆಕ್ಕನ್ನು ತನ್ನ ಮನೆಯ ಸದಸ್ಯರಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಹಿಮಬಂದು, ಅದು ಸತ್ತ ತಕ್ಷಣ ಏನನ್ನೋ ಕಳೆದುಕೊಂಡ ಭಾವನೆಯಿಂದ ಕ್ರಿಮಿನಾಶಕ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಸಾಮಾನ್ಯವಾಗಿ ನಾಯಿ, ಬೆಕ್ಕು ಅಥವಾ ಪಕ್ಷಿಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಸಹಜ. ಅವುಗಳನ್ನು ಮನೆಯ ಸದಸ್ಯರಂತೆ ಕಂಡು ಹುಟ್ಟುಹಬ್ಬವನ್ನೂ ಆಚರಿಸುವವರಿದ್ದಾರೆ. ಆದರೆ, ಅದೇ ಅತಿರೇಕದ ಪ್ರೀತಿ ಈಗ ಇಬ್ಬರು ಯುವತಿಯರ ಸಾವಿಗೆ ಕಾರಣವಾಗಿರುವುದು ನಿಜಕ್ಕೂ ದುರದೃಷ್ಟಕರ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ