ಬರೋಬ್ಬರಿ 42 ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡ ಮಹಾರಾಷ್ಟ್ರದ ಮಂಗಳವೆಡ್ ದಲ್ಲಿಯ ರಿದ್ದಿ ಸಿದ್ದಿ ಹಾಗೂ ಮಹಾಗಣಪತಿ ದೇವಸ್ಥಾನ ಒಂದು ಅದ್ಭುತ ಕಲೆ ಶೀಘ್ರದಲ್ಲಿಯೇ ಲೋಕಾರ್ಪಣೆ.
ನಿಪ್ಪಾಣಿ: ಯಾವುದೇ ಆಧುನಿಕ ತಂತ್ರಜ್ಞಾನ ನೀಲ ನಕ್ಷೆ ಉಪಯೋಗಿಸದೆ ಕೇವಲ ವಾಸ್ತು ಶಾಸ್ತ್ರವನ್ನು ನಂಬಿ ಶ್ರೀ ಮೋಹನ ಲಾಲ ಸೋಮಪುರಿ ಯವರ ಸಂಕಲ್ಪದಿಂದ ಪಾಶಾನ ಶಿಲೆಯಲ್ಲಿ ಕಟ್ಟಿದ ಈ ಮಂದಿರ ನಿರ್ಮಿಸಲು ಬರೋಬ್ಬರಿ 42 ವರ್ಷಗಳೇ ಬೇಕಾದವು.ಒಂದು ಹೇಮಾಡಪಂತಿ ಕಲೆ ಇದರ ಮಂದಿರ ಇದರ ಬಾಳಿಕೆ ಅವಧಿ ಸಾವಿರ ವರ್ಷಗಳು!! ಇದು ಕೇವಲ ಧಾರ್ಮಿಕ ಸ್ಥಾನವಲ್ಲ ಬದಲಾಗಿ ಒಂದು ವಾಸ್ತು ಶಾಸ್ತ್ರದ ಅದ್ಭುತ ಉದಾಹರಣೆ.
ಸದರಿ ದೇವಾಲಯದ ವಿಶೇಷ ಮಹತ್ವ ಹಾಗೂ ಸಂಪೂರ್ಣ ಮಾಹಿತಿಯನ್ನು ಬಿವಿ ನ್ಯೂಸ್ ನಿಪ್ಪಾಣಿ ಪ್ರತಿನಿಧಿ ಮಹಾವೀರ ಚಿಂಚಣೆ ಕಲೆ ಹಾಕಿದ್ದು ನಾವು ತೋರಿಸ್ತಿವಿ ನೋಡಿ.!! ಸದರಿ ಮಂದಿರ ಒಂದು ರಥವಾಗಿದ್ದು ಇದರಲ್ಲಿ ವೃದ್ಧಿಸಿದ್ಧಿ ಮಹಾ ಗಣಪತಿ ತಮ್ಮ ತಂದೆ ತಾಯಿ ಶಂಕರ ಪಾರ್ವತಿಗೆ ಭೇಟಿಯಾಗಲು ತೆರಳುತ್ತಿದ್ದು ಒಟ್ಟು 90 ಕಂಬಗಳ ಮೇಲೆ ನಿಂತ 164 ಗಜರಾಜರ ಈ ರಥ ಕಂಡು ಇಂದ್ರದೇವರು ತಮ್ಮ ಸೇವೆಯನ್ನು ಸಮರ್ಪಿಸಲು 102 ದೇವತೆಗಳಿಗೆ ಪಾಲ್ಗೊಳ್ಳಲು ತಿಳಿಸುತ್ತಾನೆ. ಇದರಲ್ಲಿ 106 ಮೂಷಿಕ ರಾಜರು ತಮ್ಮ ಶುಭ ವಾದ್ಯಗಳೊಂದಿಗೆ ಸಹಭಾಗಿಯಾಗಿದ್ದು ಕಂಡುಬರುತ್ತದೆ.
ಸದರಿ ಮೆರವಣಿಗೆಯು ಶಿವ ಪಾರ್ವತಿಯ ಮಹಾಲಯ ಎದುರು ಆಗಮಿಸುತ್ತಿದ್ದಂತೆ ಅವರ ಸ್ವಾಗತಕ್ಕಾಗಿ ಪ್ರವೇಶ ದ್ವಾರದಲ್ಲಿ ಸೂರ್ಯ ಹಾಗೂ ಚಂದ್ರಮೋಶಕರು ಅವರನ್ನು ಸ್ವಾಗತಿಸುತ್ತಾರೆ.ಇಂತಹ ಅದ್ಭುತ ಸಂಕಲ್ಪನೆಯಲ್ಲಿ ಮಂದಿರ ನಿರ್ಮಿಸಲಾಗಿದ್ದು ಅದೇ ರೀತಿ ಒಳಬದಿಗೆ ಪ್ರದಕ್ಷಿಣೆ ದ್ವಾರದಲ್ಲಿ 23 ದೇವ ದೇವತೆಗಳ ಮೂರ್ತಿಗಳು ಹೊರಗಿನ ಪ್ರವೇಶ ದ್ವಾರದಲ್ಲಿ ಸರ್ವಧರ್ಮೀಯರ 21 ಸಾಧುಸಂತರ ಮೂರ್ತಿಗಳಿವೆ.
ಹೊರಗಿನ ಪ್ರಾಂಗಣದಲ್ಲಿ 2 ಅಸ್ಟಸಿದ್ದಿ ದೀಪ ಸ್ತಂಭ ಅದರಲ್ಲಿ 8 ಶುಭ ಚಿಹ್ನೆಗಳು!! ಅದೇ ರೀತಿ ಹಸಿರೆಲೆಯ ರಾಮ ತುಳಸಿ ಕೆಂಪು ಎಲೆಯ ಶ್ಯಾಮ ತುಳಸಿ ಹೀಗೆ 2 ತುಳಸೀ ಕುಂಡಗಳಿವೆ.ಸದರಿ ತುಳಸಿ ಕುಂಡಗಳ ಮಹತ್ವವೆಂದರೆ 11 ಸಂಕಷ್ಟಿಗಳಲ್ಲಿ ಇವುಗಳ ಪ್ರದಕ್ಷಿಣೆ ಹಾಕಿದರೆ ಭಕ್ತರ ಇಷ್ಟಾರ್ಥ ಸಿದ್ಧಿಗೊಳ್ಳುತ್ತದೆ. ಇಂತಹ ಅದ್ಭುತ ಸೌಂದರ್ಯದ ಮಂದಿರವನ್ನು ನಿರ್ಮಿಸಿದ್ದು ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದೆ.
ವರದಿ : ಮಹಾವೀರ ಚಿಂಚಣೆ