ಹಟ್ಟಿ ಚಿನ್ನದ ಗಣಿ : ರಹೇಮತ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಟ್ಟಿ, ಸ್ವಾಮಿ ವಿವೇಕಾನಂದ ರಕ್ತ ಬಂಡಾರ ಲಿಂಗಸ್ಗೂರು ಇವರ ಸಯುಕ್ತ ಆಶಯದಲ್ಲಿ 2019 ಫೆಬ್ರುವರಿ 14 ರಂದು ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಇಂದು ಹಟ್ಟಿ ಪಟ್ಟಣದ ಹಳೆ ಪಂಚಾಯತ್ ಹತ್ತಿರ ಇರುವ ಉರ್ದು ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು
ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸಂಧಾನಿ ಎಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಮರ್ಪಣೆ ಕ್ಯಾಂಡಲ್ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ದೇಶಕ್ಕಾಗಿ ವೀರ ಮರಣ ಅಪ್ಪಿದ ಸ್ಮರಣಾರ್ಥ ದೇಶಕ್ಕಾಗಿ ವೀರಯೋಧರು ತಮ್ಮ ರಕ್ತವನ್ನು ಚೆಲ್ಲಿದ್ದಾರೆ ದೇಶದಲ್ಲಿರುವ ಕೋಟ್ಯಾಂತರ ಜನರ ಪ್ರಾಣ ಉಳಿಸಲು ಈ ರಕ್ತದಾನ ಶಿಬಿರ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಇದಾಗಿದೆ ಎಂದು ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸಂಧಾನಿ ಎಂ ಡಿ,
ಈ ಕಾರ್ಯಕ್ರಮವನ್ನು ಆಯೋಜಿಸಿದ ಟ್ರಸ್ಟ್ ಕಮಿಟಿಯ ಸದಸ್ಯರು ಅಭಿನಂದನೆ ತಿಳಿಸಿದರು.
ಈಗಾಗಲೇ ಸ್ವಯಂಪೀರ್ತವಾಗಿ ರಕ್ತದಾನ ಮಾಡಲು ಯುವಕರು ಮುಂದಾಗಿದ್ದು ಇಂಥ ಕಾರ್ಯಕ್ರಮಗಳು ಇನ್ನೂ ಹಲವಾರು ಬಾರಿ ಹಲವಾರು ಕಡೆಗಳಲ್ಲಿ ಈ ಟ್ರಸ್ಟ್ ಕಾರ್ಯನಿರ್ವಹಿಸಿದೆ ಎಂದು ಬಂದಂತ ರಕ್ತದಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಎಂಡಿ ಸಂದಾನಿ, ಸದಸ್ಯರಾದ ಶ್ರೀಕಾಂತ್, ಶ್ರೀನಿವಾಸ್ ಮಧುಶ್ರೀ, ಸೈಯದ ಟೈಲರ್, ಇಸ್ಮೈಲ್ ಪಾಷಾ, ಸುರೇಶ್ ಗೌಡ ಗುರಿಕಾರ್, ಶರಣಗೌಡ ಗುರಿಕಾರ್, ಸೇರಿದಂತೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.