ಶಹಾಪೂರ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿದ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 10-02-2025 ರಿಂದ 2 ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುತ್ತಿರುವ ಬಗ್ಗೆ ಶಹಾಪೂರ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಮಾನ್ಯ ತಹಸೀಲ್ದಾರರಾದ ಶ್ರೀ ಉಮಾಕಾಂತ ಹಳ್ಳೆ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣಭೈರೇಗೌಡ ರವರಿಗೆ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಸಿ ನಾಯಕ ರವರ ನೇತ್ರತ್ವದಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರಮೇಶ್ ರಾಠೋಡ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರಗೌಡ ಬಿರಾದಾರ ಕಂದಾಯ ನಿರೀಕ್ಷಕರಾದ ಶ್ರೀ ಮಹೇಂದ್ರಸ್ವಾಮಿ ಶ್ರೀ ಭೀಮರೆಡ್ಡಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಹಿರಿಯರಾದ ಶ್ರೀ ದೇವರಾಜ ಪಾಟೀಲ್ ಶ್ರೀ ರಾಜು ಪೂಜಾರಿ,ಸುಧೇಶ ಕುಮಾರ ವಿಜಯಕುಮಾರ ರಾಠೋಡ,ಮಂಜುನಾಥ ಭಜಂತ್ರಿ, ಗುರುಬಸವರಾಜ ,ಸಿದ್ದೇಶ್ ,ಜುಲ್ಪೇಖರ್ ಶ್ರೀ ಮತಿಗಾಯತ್ರಿ ಮೋರಗೇರಿ,ರೇಷ್ಮಾ, ಲಷ್ಮೀ ಪತ್ತಾರ ಹಾಗೂ ಶಹಾಪೂರ ತಾಲ್ಲೂಕಿನ ಇತರ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.