Ad imageAd image

” ಫಲಾನುಭವಿ ಬಡವರ ಸವಲತ್ತು ಸರ್ಕಾರ ಕೊಡುತ್ತಿಲ್ಲ| ಮತ್ತು ನುಡಿದಂತೆ ನಡೆದ್ದಿದ್ದೇವೆ | ಜಾಹಿರಾತುಗಳಲ್ಲಿ ಸೀಮಿತ – ಶಾಸಕ ಎಸ್ ಮುನಿರಾಜು ಆರೋಪ”

Bharath Vaibhav
” ಫಲಾನುಭವಿ ಬಡವರ ಸವಲತ್ತು ಸರ್ಕಾರ ಕೊಡುತ್ತಿಲ್ಲ| ಮತ್ತು ನುಡಿದಂತೆ ನಡೆದ್ದಿದ್ದೇವೆ | ಜಾಹಿರಾತುಗಳಲ್ಲಿ ಸೀಮಿತ – ಶಾಸಕ ಎಸ್ ಮುನಿರಾಜು ಆರೋಪ”
WhatsApp Group Join Now
Telegram Group Join Now

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಮೂಕ್ಕಾಲು ವರ್ಷವಾಯಿತು. ಆದರೆ ಫಲಾನುಭವಿ ಬಡವರಿಗೆ ಸಿಗುವ ಸವಲತ್ತುಗಳನ್ನು ಕಾಂಗ್ರೆಸ್ ಸರ್ಕಾರ ಕೊಡುತ್ತಿಲ್ಲಾ ಮತ್ತು ನಮ್ಮ ಸರ್ಕಾರ ನುಡಿದಂತೆ ನಡೆದ್ದಿದ್ದೇವೆ ಎಂದು ಹೇಳುವ ಸರ್ಕಾರ ಬರೇ ಜಾಹೀರಾತುಗಳಿಗೆ ಸೀಮಿತ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಮುನಿರಾಜು ಆರೋಪಿಸಿದರು.

ಅವರು ಶೆಟ್ಟಿಹಳ್ಳಿಯಲ್ಲಿರುವ ತಮ್ಮ ಪ್ರದಾನ ಕಚೇರಿಯಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳ ಅರ್ಜಿಗಳನ್ನು ಸಮಿತಿಗೆ ನೀಡುವ ಪ್ರಕ್ರಿಯೆಗೆ ಸಂಭಂದಪಟ್ಟ ಇಲಾಖಾಧಿಕಾರಿಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮುನಿರಾಜು ಚುನಾವಣೆಯ ಮುನ್ನ ಐದು ಉಚಿತ ಗ್ಯಾರಂಟಿ ಕೊಡುವುದಾಗಿ ಸಿದ್ದರಾಮಯ್ಯ ತಮ್ಮ ಮಧುರ ಕಂಠದಿಂದ ಘೋಷಣೆ ಮಾಡಿದ್ದರು.

ಆದರೆ ಜಾಹೀರಾತುಗಳಿಗೆ ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುವ ಮೂಲಕ ನುಡಿದಂತೆ ನಡೆದ್ದಿದ್ದೇವೆಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಹೊರತು ಬಡವರ ಕೂಲಿ ಕಾರ್ಮಿಕರ ಮತ್ತು ದೀನದಲಿತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ನಂತರ ಎನ್ ಡಿಎ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ವಿತ್ ಸಚಿವೆ ನಿರ್ಮಲ ಸೀತಾರಾಮ್ ಮತ್ತು ಕೇಂದ್ರ ಸರಕಾರಕ್ಕೆ ಬಜೆಟ್ ಗೆ ಸ್ವಾಗತ ಎಂದರು.

ವರದಿ : ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!