ಕುರುಗೋಡು : ಪ್ರಥಮವಾಗಿ ಒಂದು ದಿನ ಮುಂಚಿತವಾಗಿ ದೇವಸ್ಥಾನದಲ್ಲಿ ಪಾಂಡುರಂಗ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಬೆಳಗ್ಗೆ 12 ಗಂಟೆಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೊದಲು ಗಂಗೆಗೆ ತೆರಳಿದ ಕುಂಭ ಹೊತ್ತ ಸುಮಂಗಲಿಯರು ಹಾಗೂ ವಿವಿಧ ಕಲಾತಂಡಗಳು ಕಂಸಾಳೆ ನೃತ್ಯ ಪ್ರದರ್ಶನ, ಭಜನೆ ಮೂಲಕ ದೇವಸ್ಥಾನದಕ್ಕೆ ಗಂಗೆ ತರಲಾಗಿತ್ತ ನಂತರ ಐದು ಜೋಡಿಗಳು ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದ ನವಜೀವನಕ್ಕೆ ಕಾಲಿಟ್ಟರು ತದನಂತರ ವೇದಿಕೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸುಕ್ಷೇತ್ರ ರೌಡಕುಂದ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಎಚ್ ವೀರಾಪುರ ಗ್ರಾಮದ ಜಡೀಸಿದ್ದೇಶ್ವರ ಸ್ವಾಮಿಜಿ ಅವರು ಭಕ್ತರ ಉದ್ದೇಶಿಸಿ ಆಶೀರ್ವಚನ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಿಗೆ ಸನ್ಮಾನ ಮಾಡಲಾಯಿತು. ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮುಷ್ಠಗಟ್ಟೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಂಖ್ಯೆಯ ಭಕ್ತರು ಇದ್ದರು