ಬಸವನಬಾಗೇವಾಡಿ: ಆದರ್ಶ ಶಿಕ್ಷಕರ ವೇದಿಕೆ ಪೆನೆಲ್ ವತಿಯಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ಬಸವನಬಾಗೇವಾಡಿ ಪಟ್ಟಣದಲ್ಲಿ ಪ್ರೈಮರಿ ಟೀಚರ್ಸ್ ಕೋ ಆಪರೇಟಿವ್ ಸೊಸೈಟಿ (ಲಿ) ಕಚೇರಿಯಲ್ಲಿ 2025-30ನೇ ಸಾಲಿಗೆ ನಿರ್ದೇಶಕ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ಜರುಗಿತು.
ದಿನಾಂಕ 13.2.2025 ರಂದು ಮುಂಜಾನೆ 9 ರಿಂದ 11ರವರೆಗೆ ನಾಮಪತ್ರ ಮುಕ್ತ ಸಲ್ಲಿಕೆಯಾಗಿತ್ತು ತದನಂತರ ಮಧ್ಯಾಹ್ನ 1:00 ಗಂಟೆಗೆ ಆದರ್ಶ ಶಿಕ್ಷಕರ ವೇದಿಕೆ ಪೆನಲ್ ವತಿಯಿಂದ ಸರ್ವ ಶಿಕ್ಷಕರ ಸಮ್ಮತಿ ಮೇರೆಗೆ ಅವಿರೋಧವಾಗಿ ಶ್ರೀ ಹೊನ್ನಪ್ಪ ಗೊಳಸಂಗಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷಕರಾಗಿ ಶ್ರೀ ಭಾಷಾಸಾಬ್ ಮನಗೂಳಿ ಶಿಕ್ಷಕರನ್ನು ಅವಿರೋಧವಾಗಿ ಆಯ್ಕೆಯಾದರು.
ಈ ಕಾರ್ಯಕ್ರಮದಲ್ಲಿ ಶ್ರೀ ಉಮೇಶ್ ಕೌಲಗಿ ಜಿಲ್ಲಾಧ್ಯಕ್ಷಕರು ಆದರ್ಶ ಶಿಕ್ಷಕ ವೇದಿಕೆ ಪೆನಲ್,
ಶ್ರೀ ಎಂ ಎನ್ ಯಾಳವಾರ ಹಾಗೂ ಶ್ರೀ ಎಚ್ ಬಿ ಬಾರಿಕಾಯಿ ಮತ್ತು ಶ್ರೀ ಸಿದ್ಧಣ್ಣ ಎಚ್ ಉಕ್ಕಲಿ ರಾಜ್ಯ ಕಾರ್ಯದ್ಯಕ್ಷರು ಗ್ರಾಮಿಣ ಶಿಕ್ಷಕರ ಸಂಘ ಹುಬ್ಬಳ್ಳಿ ಹಾಗೂ ಅಖಂಡ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ಶಿಕ್ಷಕರು ಉಪಸ್ಥಿತರಿದ್ದರು.
ವರದಿ:ಕೃಷ್ಣಾ ಎಚ್. ರಾಠೋಡ