ಚಿಂಚೋಳಿ: ಸುಲಪೇಟ್ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ದಿಂದ ತೇರಿನ ಮೈದಾನದವರೆಗೆ ಪ್ರಭಾವಳಿ ಮೆರವಣಿಗೆ ನಡೆಯುತ್ತೆ ನಂತರ ಅಗ್ನಿಕುಂಡ ಪುರಂದರ ಅಗ್ನಿ ತಿಳಿಯದ ನಂತರ ಗ್ರಾಮದ ಹಿರಿಯ ಮುಖಂಡ ಗ್ರಾಮಸ್ಥರು ಅಗ್ನಿ ಪ್ರವೇಶ ಮಾಡುತ್ತಾರೆ ಸಾಮರಸ್ಯದ ಬೀಡು ಸುಲೇಪೇಟ ದೇವರ ವೈಭವ ನಂತರ ಗ್ರಾಮಗಳಲ್ಲಿ ಶುಭ ಕಾರ್ಯ ಶ್ರೀವೀರಭದ್ರನ ಜಾತ್ರೋತ್ಸವ ಹಿಂದು ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ರೌದ್ರಾವತಾರದಿಂದಲೇ ಶಿಷ್ಟರಕ್ಷಕ,ದುಷ್ಟರ ಸಂಹಾರಿಯಾಗಿ ಹೊರಹೊಮ್ಮುವ ಪರಶಿವನ ಅವತಾರವೇ ವೀರಭದ್ರೇಶ್ವರ ರಾಜ್ಯ ಸೇರಿ ದೇಶದ ವಿವಿಧೆಡೆ ಇರುವ ಸುಲೇಪೇಟದಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವರು.ಪ್ರಮುಖ ವೀರಭದ್ರೇಶ್ವರ ದವಾಸ್ಥಾನಗಳಲ್ಲಿ ಸುಲೇಪೇಟದ ಸನ್ನಿಧಾನವೂ ಒಂದು.ಶ್ರೀ ವೀರಭದ್ರ ದೇವರಿಂದ ಸುಲೇಪೇಟ ಸರ್ವ ಜನಾಂಗದ ಸಾಮರಸ್ಯದ ಸುಲೇಪೇಟ ಸುತ್ತಮುತ್ತಲ ಬೀಡಾಗಿದೆ.ಹಾಗೂ ನೂರಾರು ಗ್ರಾಮಗಳ ಸಹಸ್ರಾರು ಜನತೆ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಪುನೀತ್ ರಾಗುತ್ತಾರೆ.ವೀರಭದ್ರೇಶ್ವರ ಜಾತ್ರೋತ್ಸವಕ್ಕೆ ಯುಗಾದಿ ದಿನದಂದೆ ಚಾಲನೆ ದೊರೆಯುತ್ತದೆ. ಅಂದಿನಿಂದ ತಿಂಗಳ ಪರ್ಯಂತ.ನಿತ್ಯ ವೀರಭದ್ರೇಶ್ವರ ದೇವಾಲಯದಿಂದ ಶ್ರೀ ಸಂಗಮೇಶ್ವರ ದೇಗುಲಕ್ಕೆ ವೀರಭದ್ರೇಶ್ವರ ಉತ್ಸವ ಮೂರ್ತಿ ಪಲ್ಲಕ್ಕಿ ಹಾಗೂ ಉಚ್ಚಾಯಿ ಮೆರವಣಿಗೆ ನಡೆಯುತ್ತದೆ.ಶ್ರೀ ವೀರಭದ್ರೇಶ್ವರ ದೇವರಿಗೆ ಐತಿಹಾಸಿಕ ಹಿನ್ನೆಲೆ ಇದೆ.
ಪುರಾಣದಲ್ಲೂ ಕ್ಷೇತ್ರದ ಉಲ್ಲೇಖವಿದೆ.ಇಲ್ಲಿ ಬಂದು ಹರಕೆ ಕಟ್ಟಿದರೆ ಇಷ್ಟಾರ್ಥ ಸಿದ್ಧಿ ಎಂಬುದು ಭಕ್ತರ ನಂಬಿಕೆ. ಜಾತ್ರೆ ಆರಂಭಗೊಳ್ಳುವ ದಿನ ದಿಂದ ಮುಗಿಯುವವರೆಗೂ ಸುತ್ತಲಿನ 15ರಿಂದ 20 ಹಳ್ಳಿಗಳಲ್ಲಿ ಯಾವುದೇ ಶುಭ ಸಮಾರಂಭ ಹಮ್ಮಿಕೊಳ್ಳುವುದಿಲ್ಲ. ಮೊದಲು ಶ್ರೀ ವೀರಭದ್ರೇಶ್ವರ ದೇವರ ಬೆಳಗ್ಗೆ ಪ್ರಭಾವಳಿ ಸಂಜೆ ರಥೋತ್ಸವ ಸುಲೇಪೇಟ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಅಭಿಷೇಕ,ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. 7ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾವಳಿ ಉತ್ಸವ ಜರುಗಲಿದೆ. ಸಂಜೆ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ವೈಭವದಿಂದ ನಡೆಯಲಿದೆ.ಶುಕ್ರವಾರ ಬೆಳಗ್ಗೆ 7ಕ್ಕೆ ಹಾಗೂ ಸಂಜೆ 4ಕ್ಕೆ ಥೇರ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಜರುಗಲಿವೆ. ಸಂಜೆ 7.30ಕ್ಕೆ ಹಾಸ್ಯ ಹಾಗೂ ಸಂಗೀತ ಕಾರ್ಯಕ್ರಮ ನಡಯಲಿದೆ.ರಾತ್ರಿ 10ಕ್ಕೆ ಮದ್ದು ಸುಡುವ ಸಮಾರಂಭದ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.ಸುಲೇಪೇಟದ ಶ್ರೀ ವೀರಭದ್ರೇಶ್ವರ ದೇವಾಲಯದ ಅಸಂಖ್ಯಾತ ಭಕ್ತರನ್ನು ಹೊಂದಿದ್ದು, ಹೀಗಾಗಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಿದೆ.ಸರ್ಕಾರ ಅನುದಾನ ನೀಡಿದರೆ ಪ್ರಗತಿ ಕಾರ್ಯ ಸಹಕಾರಿಯಾಗಲಿದೆ.ಎಂದು ತಿಳಿದು ಬರುತ್ತದೆ.
ವರದಿ: ಸುನಿಲ್ ಸಲಗರ




