Ad imageAd image

ಗಂಟಲಿನಲ್ಲಿ ದೋಸೆ ಸಿಲುಕಿ ವ್ಯಕ್ತಿ ಸಾವು

Bharath Vaibhav
ಗಂಟಲಿನಲ್ಲಿ ದೋಸೆ ಸಿಲುಕಿ ವ್ಯಕ್ತಿ ಸಾವು
WhatsApp Group Join Now
Telegram Group Join Now

ಗಟಲಿನಲ್ಲಿ ದೋಸೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಾಗರ್ ಕರ್ನೂಲ್ ನಡೆದಿದೆ.ಕಲ್ವಕುರ್ತಿ ನಿವಾಸಿ ವೆಂಕಟಯ್ಯ ಮದ್ಯ ಸೇವಿಸಿ ದೋಸೆ ತಿಂದಿದ್ದ.

ಆದರೆ ದೋಸೆ ಗಂಟಲಿನಲ್ಲಿ ಸಿಲುಕಿದ್ದು, ಉಸಿರಾಡಲು ಆಗಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ಪ್ರಜ್ಞೆ ತಪ್ಪಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಅದಾಗಲೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ಹಿಂದೆ ಕೇರಳದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಲಯಾರ್ ನಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ನಡೆಯುತ್ತಿದ್ದವು. 50 ವರ್ಷದ ವ್ಯಕ್ತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯ ಭಾಗವಾಗಿ ಇಡ್ಲಿ ತಿನ್ನುವಾಗ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಸ್ಥಳೀಯರು ಅವನ ಗಂಟಲಿನಿಂದ ಇಡ್ಲಿಗಳನ್ನು ಹೊರತೆಗೆದು ಅವನನ್ನು ಉಳಿಸಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರ ಸ್ಥಿತಿ ಹದಗೆಟ್ಟಿ ಅವರು ಪ್ರಾಣ ಕಳೆದುಕೊಂಡರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!