Ad imageAd image

ವೈದ್ಯರಿಲ್ಲ, ಫೋನ್​ ನೋಡಿಕೊಂಡು ಗರ್ಭಿಣಿಯ ಹೊಟ್ಟೆ ಕೊಯ್ದ ನರ್ಸ್, ಅವಳಿ ಶಿಶುಗಳ ಸಾವು

Bharath Vaibhav
ವೈದ್ಯರಿಲ್ಲ, ಫೋನ್​ ನೋಡಿಕೊಂಡು ಗರ್ಭಿಣಿಯ ಹೊಟ್ಟೆ ಕೊಯ್ದ ನರ್ಸ್, ಅವಳಿ ಶಿಶುಗಳ ಸಾವು
WhatsApp Group Join Now
Telegram Group Join Now

ಮೊಬೈಲ್​ನಲ್ಲಿ ವೈದ್ಯರ ಸೂಚನೆ ಪಡೆಯುತ್ತಾ, ನರ್ಸ್ ಒಬ್ಬರು​ ಗರ್ಭಿಣಿ(Pregnant)ಗೆ ಸಿಸೇರಿಯನ್ ಮಾಡಿದ್ದಾರೆ, ಶಸ್ತ್ರಚಿಕಿತ್ಸೆ ನಡೆದು ಕೆಲವೇ ನಿಮಿಷಗಳಲ್ಲಿ ಅವಳಿ ಶಿಶುಗಳು ಸಾವನ್ನಪ್ಪಿವೆ. ಈ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಆಕ್ರೋಶ ಭುಗಿಲೆದ್ದಿದೆ. ಆಸ್ಪತ್ರೆಯಲ್ಲಿಲ್ಲದ ವೈದ್ಯರು ಅಲ್ಲೆಲ್ಲೋ ಕುಳಿತುಕೊಂಡು ನರ್ಸ್​ಗೆ ಸೂಚನೆ ನೀಡುತ್ತಿದ್ದರು. ಗರ್ಭಿಣಿ ಐವಿಎಫ್​ ಮಾಡಿಸಿಕೊಂಡಿದ್ದರು. ಈ ಪ್ರಕರಣವು ಸಾಧಾರಣ ಹೆರಿಗೆಯಂತಿರಲಿಲ್ಲ, ತುಂಬಾ ಸೂಕ್ಷ್ಮವಾಗಿತ್ತು.

ತೆಲಂಗಾಣ, ಮೇ 06: ಮೊಬೈಲ್​ನಲ್ಲಿ ವೈದ್ಯರ ಸೂಚನೆ ಪಡೆಯುತ್ತಾ, ನರ್ಸ್ ಒಬ್ಬರು​ ಗರ್ಭಿಣಿ(Pregnant)ಗೆ ಸಿಸೇರಿಯನ್ ಮಾಡಿದ್ದಾರೆ, ಶಸ್ತ್ರಚಿಕಿತ್ಸೆ ನಡೆದು ಕೆಲವೇ ನಿಮಿಷಗಳಲ್ಲಿ ಅವಳಿ ಶಿಶುಗಳು ಸಾವನ್ನಪ್ಪಿವೆ. ಈ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಆಕ್ರೋಶ ಭುಗಿಲೆದ್ದಿದೆ.

ಆಸ್ಪತ್ರೆಯಲ್ಲಿಲ್ಲದ ವೈದ್ಯರು ಅಲ್ಲೆಲ್ಲೋ ಕುಳಿತುಕೊಂಡು ನರ್ಸ್​ಗೆ ಸೂಚನೆ ನೀಡುತ್ತಿದ್ದರು. ಗರ್ಭಿಣಿ ಐವಿಎಫ್​ ಮಾಡಿಸಿಕೊಂಡಿದ್ದರು. ಈ ಪ್ರಕರಣವು ಸಾಧಾರಣ ಹೆರಿಗೆಯಂತಿರಲಿಲ್ಲ, ತುಂಬಾ ಸೂಕ್ಷ್ಮವಾಗಿತ್ತು. ವಾರಗಳು ತುಂಬುವ ಮುನ್ನವೇ 18 ವಾರಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಶಿಶುಗಳನ್ನು ಹೊರತೆಗೆದಿದ್ದರು. ತಾಯಿಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಶಸ್ತ್ರ ಚಿಕಿತ್ಸೆ ಮುಗಿದು ಕೆಲವೇ ಗಂಟೆಗಳಲ್ಲಿ ಶಿಶುಗಳು ಸಾನ್ನಪ್ಪಿವೆ.

ಈ ಘಟನೆಯು ಆಸ್ಪತ್ರೆಯ ಹೊರಗೆ ಭಾರಿ ಪ್ರತಿಭಟನೆಗೆ ಕಾರಣವಾಯಿತು. ವೈದ್ಯರು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇರುವ ಬದಲು ಮೊಬೈಲ್​ ಮೂಲಕ ಸೂಚನೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಿಕರು ಧರಣಿ ನಡೆಸಿದರು ಮತ್ತು ನಂತರ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಅಧಿಕೃತ ದೂರು ದಾಖಲಿಸಿದರು, ತೀವ್ರ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಹೊರಿಸಿದರು.

ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿದ ರಂಗಾರೆಡ್ಡಿ ಜಿಲ್ಲೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಸೇರಿದಂತೆ, ಖಾಸಗಿ ಆಸ್ಪತ್ರೆಯನ್ನು ತಕ್ಷಣವೇ ಪರಿಶೀಲಿಸಿದರು. ಯಾವುದೇ ಶಸ್ತ್ರಚಿಕಿತ್ಸೆ ನಡೆಸಲು, ಹಿರಿಯ ವೈದ್ಯರು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ದೈಹಿಕವಾಗಿ ಹಾಜರಿರಬೇಕು,ಪ್ರಸೂತಿ ತಜ್ಞರಿಂದ ದೂರವಾಣಿ ಮೂಲಕ ಸೂಚನೆಗಳನ್ನು ಪಡೆಯುತ್ತಾ ನರ್ಸ್​ ಆಪರೇಷನ್ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ ತನಿಖೆ ನಡೆಸುತ್ತಿದ್ದೇವೆ, ಸಧ್ಯಕ್ಕೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!