Ad imageAd image

ಡಿ.ಕೆ.ಶಿವಕುಮಾರ್ ಶಾಸಕರ ಖರೀದಿಗೆ ಹೊರಟಿದ್ದಾರೆ : ಪ್ರಹ್ಲಾದ್ ಜೋಶಿ

Bharath Vaibhav
ಡಿ.ಕೆ.ಶಿವಕುಮಾರ್ ಶಾಸಕರ ಖರೀದಿಗೆ ಹೊರಟಿದ್ದಾರೆ : ಪ್ರಹ್ಲಾದ್ ಜೋಶಿ
WhatsApp Group Join Now
Telegram Group Join Now

ಹುಬ್ಬಳ್ಳಿ: ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಶಾಸಕರ ಖರೀದಿಗೆ ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಕಿತ್ತಾಟ ಆರಂಭವಾಗಿದೆ.

ಡಿ.ಕೆ.ಶಿವಕುಮಾರ್ ನಂಬರ್ ಗೇಮ್ ಆಡಲು ಆರಂಭಿಸಿದ್ದಾರೆ. ಶಾಸಕರ ಖರೀದಿಗೆ ಮುಂದಾಗಿದ್ದಾರೆ ಎಂದರು.

ಶಾಸಕರು, ಸಚಿವರ ಪ್ರತ್ಯೇಕ ಸಭೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಇಷ್ಟುದಿನ ಹೋಗದೇ ಈ ಸಂದರ್ಭದಲ್ಲಿ ಯಾಕೆ ಜೈಲಿಗೆ ಹೋಗಿ ಶಾಸಕರೊಂದಿಗೆ ಮಾತುಕತೆ ನಡೆಸಿದರು? ಒಂದು ವೇಳೆ ಇಬ್ಬರು ಶಾಸಕರು ಹೊರಬಂದರೆ ಅವರು ತನ್ನ ಪರವಾಗಿ ಇರಲಿ ಎಂಬುದು ಡಿಕೆಶಿ ತಂತ್ರ. ಡಿಸಿಎಂ ತಮ್ಮ ತಮ್ಮ ನಂಬರ್ ಜೋಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!