ಅಥಣಿ : ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮೀತಿ ಅಥಣಿ ಘಟಕದ ವತಿಯಿಂದ ಹಮ್ಮಿಕೊಂಡ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಪರಿನಿರ್ವಾಣ ದಿನದ ಅಂಗವಾಗಿ ದಿನಾಂಕ : 29-12-2024 ರಂದು ಡಾ|| ಬಿ. ಆರ್. ಅಂಬೇಡ್ಕರ, ಶ್ರೀಮತಿ ಸಾವಿತ್ರಿಬಾಯಿ ಫುಲೆ ಹಾಗೂ ಭಾರತೀಯ ಸಂವಿಧಾನದ ಬಗ್ಗೆ ಲಿಖಿತ ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡ ಪ್ರಯುಕ್ತವಾಗಿ ಶುಕ್ರವಾರ 14ರಂದು ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಮಾಜಿ ಉಪಮುಖ್ಯಮಂತ್ರಿಗಳು ಅಥಣಿ ಮತಕ್ಷೇತ್ರ ಶಾಸಕರು . ಲಕ್ಷ್ಮಣ ಸಂಗಪ್ಪ ಸವದಿ ಅವರು ಉದ್ಘಾಟಿಸಿ ಮಾತನಾಡಿದರು.
ಅವರು ಅಥಣಿ ಖೋತ ಸಭಾಭವನ ಎಸ್.ಎಸ್.ಎಮ್.ಎಸ್. ಕಾಲೇಜು ಆವರಣದಲ್ಲಿ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದಿನ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ಜೊತೆ ಮಹಾತ್ಮರ ಚಿಂತನೆ ಅವರ ಆದರ್ಶಗಳನ್ನು ಮಕ್ಕಳ ಜೀವನದಲ್ಲಿ ಬಿತ್ತರಿಸುವಂತಹ ಕೆಲಸ ಸಂಘಟನೆ ಮಾಡ್ತಾ ಇದೆ ಮಕ್ಕಳು ಕೂಡ ಅವರ ಆದರ್ಶ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ದಿನಮಾನಗಳಲ್ಲಿ ಎತ್ತರ ಮಟ್ಟಿಗೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಂತೆ ಜ್ಞಾನ ಜ್ಯೋತಿ ಧಮೃಭೂಮಿ ಗೂಗವಾಡ, ಹಾಗೂ ರವೀಂದ್ರ ಗಡಾದಿ ಐ.ಪಿ.ಎಸ್. ಅಧಿಕಾರಿಗಳು ಮಾತನಾಡಿದರು.
ಡಾ. ಆನಂದ ಗುಂಜಿಗಾಂವಿ ಖ್ಯಾತ ಚಿಕ್ಕ ಮಕ್ಕಳ ವೈದ್ಯರು, ಅಥಣಿ, ಶ್ರೀಕಾಂತ ತಳವಾರ ಸಂಚಾಲಕರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ, ರವಿ ಕಾಂಬಳೆ ಬೆಳಗಾವಿ ಜಿಲ್ಲೆ ಬಿ. ಎಸ್. ಕಾಂಬಳೆ ಪ್ರಾಚಾರ್ಯರು, ಎಸ್.ಎಸ್.ಎಮ್.ಎಸ್. ಕಾಲೇಜು, ಅಥಣಿ, ರಾವಸಾಬ ಐಹೋಳೆಮಾಜಿ ಪುರಸಭೆ ಅಧ್ಯಕ್ಷರು ಹಾಲಿ ಸದಸ್ಯರು ಹಾಗೂ ಉದ್ದಿಮೇದಾರರು, ಅಥಣಿ. ಅಮೋಘ ಖೋಬ್ರಿ ಖ್ಯಾತ ವಕೀಲರು, ಆಥಣಿ. ಡಾ. ಸದಾಶಿವ ಭಜಂತ್ರಿ ವೈದ್ಯರು, ಚಮಕೇರಿ. ಕುಮಾರ ಬನಸೋಡೆ,ಶ್ರೀಕಾಂತ ಅಲಗೂರ, ರಾಜು ಪರ್ನಾಕರ ಮಹಾಂತೇಶ ಬನಸೋಡೆ, ಪಂಡಿತ ಕಾಂಬಳೆ, ಪಾಂಡು ಕಾಂಬಳೆ,ಮಡಿವಾಳಪ್ಪ ವಡ್ಡರ, ಚಂದು ಬನಸೋಡೆ, ಅಶೋಕ ನಿಡೋಣಿ, ಗೊರಖನಾಥ ಭಂಡಾರೆ, ವಿಲಾಸ ಕಾಂಬಳೆ,ಶಂಕರ ಕಾಂಬಳೆ, ಧನಪಾಲ ಕಾಂಬಳೆ, ವಿಠ್ಠಲ ದೊಡಮನಿ, ಮೀಥುನ ಕಾಂಬಳೆ, ಮಹಾದೇವ ಮಾದರ, ಸುಧಾಕರ ಬಳವಾಡಕರ, ಲಕ್ಕಪ್ಪ ಕಾಂಬಳೆ ಇದ್ದರು
ವರದಿ : ರಾಜು ವಾಘಮಾರೆ