ಮುಂಬೈ: ಪ್ರವಾಹದಿಂದ ನಲುಗಿರುವ ಅಸ್ಸಾಂನಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿರುವ ರಿಲಯನ್ಸ್ ಪ್ರತಿಷ್ಠಾನ ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಕೋಟಿ ರೂ. ದೇಣಿಗೆ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರತಿಷ್ಠಾನದ ಮುಖ್ಯಸ್ಥೆ ನೀತಾ ಎಂ. ಅಂಬಾನಿ, "ರಿಲಯನ್ಸ್ ಫೌಂಡೇಷನ್, ವನತಾರಾದ ನಮ್ಮ ತಂಡದ ಸ್ವಯಂಸೇವಕರು ಈಗಾಗಲೇ ಅಸ್ಸಾಂ ಸರ್ಕಾರದ ಜತೆ ಕೈಜೋಡಿಸಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಂತು ಎಲ್ಲ ರೀತಿಯ ನೆರವನ್ನೂ ನೀಡಲಾಗುತ್ತಿದೆ' ಎಂದಿದ್ದಾರೆ.


