ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರವೇಶಿಸುವ ಮುನ್ನ ಬಾಗಿಲಿಗೆ ಹಾಗೂ ಮುಖ್ಯಮಂತ್ರಿಯವರ ಪೀಠಕ್ಕೆ ನಮಸ್ಕರಿಸಿದರು.
ಅಧಿವೇಶನದ ಕಲಾಪದಲ್ಲಿ ಭಾಗವಹಿಸಲು ವಿಧಾನಸೌಧಕ್ಕೆ ಆಗಮಿಸಿದ ಅವರು, ಸದನದ ಒಳ ಪ್ರವೇಶಿಸುವ ಬಾಗಿಲಿಗೆ ಶಿರಬಾಗಿ ನಮಸ್ಕರಿಸಿದರು.
ಬಳಿಕ ಮುಖ್ಯಮಂತ್ರಿಯವರಿಗೆ ಮೀಸಲಾದ ಆಸನದ ಬಳಿಗೆ ತೆರಳಿ, ಆ ಪೀಠಕ್ಕೆ ಭಕ್ತಿಯಿಂದ ನಮಸ್ಕಾರ ಸಲ್ಲಿಸಿ ತಮ್ಮ ಜವಾಬ್ದಾರಿಯ ಮೇಲಿನ ಗೌರವವನ್ನು ಪ್ರದರ್ಶಿಸಿದರು.


