LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಆಪ್ತರಿಗೆ ಮಂತ್ರಿಗಿರಿ ತಪ್ಪಿದ್ದಕ್ಕೆ ಅಸಮಾಧಾನ : ಕೆ.ಸಿ. ವೇಣುಗೋಪಾಲ್ ಬಳಿ ಸಿದ್ದು ಬೇಸರ

Advertisement

ನವದೆಹಲಿ : ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ವೇಳೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ (Basavaraja shivannanavar) ಅವರಿಗೆ ಸಚಿವ ಸ್ಥಾನ (Ministry) ನೀಡದ ವಿಚಾರವಾಗಿ ಸಿದ್ದರಾಮಯ್ಯ (Siddaramaiah) ಅವರು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಆಗಸ್ಟ್ 20ರ ಬುಧವಾರ ನಡೆದ ಈ ಭೇಟಿಯಲ್ಲಿ ಶಿವಣ್ಣನವರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದರು. ಆದರೆ ಹೈಕಮಾಂಡ್ ಮಹಿಳಾ ಮೀಸಲಾತಿ ಅಡಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು.

ಈ ನಿರ್ಧಾರದಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದರು. ನಂತರ ಬೆಳವಣಿಗೆಯಲ್ಲಿ ಗಾಯತ್ರಿ ಅವರು ಸದ್ಯಕ್ಕೆ ಪ್ರಮಾಣ ವಚನ ಸ್ವೀಕರಿಸದಂತೆ ಸೂಚನೆ ನೀಡಲಾಗಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಜರಾಗಿರಲಿಲ್ಲ.

ಸಿದ್ದರಾಮಯ್ಯ ಸೂಚಿಸಿರುವ ಶಾಸಕರಿಗೆ ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುವುದು ಎಂದು ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ ಮಹಿಳಾ ಕೋಟಾದಲ್ಲಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಸಿದ್ದರಾಮಯ್ಯ ಅವರ ಬೇಡಿಕೆ ಈಡೇರದೆ, ಅವರನ್ನು ಪರಿಷತ್ ಉಪಸಭಾಪತಿಯನ್ನಾಗಿ ನೇಮಿಸಿರುವುದಕ್ಕೂ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೆಕ್ಕಾಯ್ ಟೆಸ್ಟ್ : ಬಾಂಗ್ಲಾದೇಶ ತಿರುಗೇಟು ಭಾರತದ ಯುವ ಬ್ಯಾಡ್ಮಿಟನ್ ಜೋಡಿಗೆ ಕಂಚಿನ ಪದಕ ಆಪ್ತರಿಗೆ ಮಂತ್ರಿಗಿರಿ ತಪ್ಪಿದ್ದಕ್ಕೆ ಅಸಮಾಧಾನ : ಕೆ.ಸಿ. ವೇಣುಗೋಪಾಲ್ ಬಳಿ ಸಿದ್ದು ಬೇಸರರಾಷ್ಟ್ರೀಯ ಅಧ್ಯಕ್ಷ ಅನ್ನೋಕೆ ನಾಚಿಕೆಯಾದರೆ ದಲಿತ ಅನ್ನಿ: ಖರ್ಗೆ ತೀವ್ರ ವಾಗ್ದಾಳಿ 200 ಹಣಕ್ಕಾಗಿ ಮಂಗಳಮುಖಿಯ ಕತ್ತು ಸೀಳಿ ಬರ್ಬರ ಹತ್ಯೆ; ಆರೋಪಿ ಅರೆಸ್ಟ್ ನೊಂದವರ ಜೊತೆ ದುರ್ವರ್ತನೆ ತೋರಿದ ಪಿಎಸ್‌ಐ ವರ್ಗಾವಣೆ ; ಠಾಣೆಯಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನರುಹಂಪಿ ಪ್ರವಾಸಕ್ಕೆ ಬಂದಿದ್ದ ತಾಯಿ ಹಾಗೂ ಮಗಳು ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ: ಮೂವರು ಎಂಜಿನಿಯರ್ ಗಳು ಸಾವು, ಓರ್ವನ ಸ್ಥಿತಿ ಗಂಭೀರಸ್ಪೀನ್ನರ್ ಸಾಯಿರಾಜ್ ಜೇಯನ್ ಆಡಿಸುವ ಕುರಿತು ನಾಳೆಯೇ ನಿರ್ಧಾರ : ಬಹುತಲೆ ಭಾರತ- ಶ್ರೀಲಂಕ ಎರಡನೇ ಟೆಸ್ಟ್ ನಾಳೆಯಿಂದ