LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಕೈದಿಗಳಿಂದ ಹಣ ವಸೂಲಿ, ಅಶ್ಲೀಲ ವಿಡಿಯೋ ಕಾಲ್ : ಲೇಡಿ ಪೊಲೀಸ್ ವಿರುದ್ದ ಕಿಡಿಕಾರಿದ ರೌಡಿಶೀಟರ್ ತಂದೆ

Advertisement

ತುಮಕೂರು: ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್. ಜಯಶ್ರೀ ಎಂಬ ಮಹಿಳಾ ಪೊಲೀಸ್ ಅಧಿಕಾರಿಗೆ ಸಂಬಂಧಿಸಿದ ವಿವಾದಾತ್ಮಕ (Shocking) ವಿಡಿಯೋ ಕಾಲ್ (Video Call) ಪ್ರಕರಣದ ಬೆನ್ನಲ್ಲೇ, ಸಾಯಿ ಕುಮಾರ್ ಅಲಿಯಾಸ್ ಸುರೇಶ್ ಅವರ ತಂದೆ ನಾಗಲಿಂಗಯ್ಯ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಮಗನಿಗೆ ಪದೇಪದೇ ಸುಳ್ಳು ಪ್ರಕರಣಗಳನ್ನು (Fake Case) ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮಾಧ್ಯಮಗಳ ಮುಂದೆ ಕಣ್ಣೀರಿಟ್ಟು ಅಸಹಾಯಕತೆ ತೋಡಿಕೊಂಡಿದ್ದಾರೆ.

ಕುಣಿಗಲ್ ತಾಲೂಕಿನ ಕಲ್ಲುಹಳ್ಳಿ ಪಾಳ್ಯದ ತಮ್ಮ ತೋಟದ ಮನೆಯಲ್ಲಿ ಮಾತನಾಡಿದ ನಾಗಲಿಂಗಯ್ಯ, ಮಗನ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಗ ತಪ್ಪು ಮಾಡಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಿ, ಆದರೆ ಆತನ ಜೀವನದ ಜೊತೆ ಆಟವಾಡಬಾರದು ಎಂದು ಮನವಿ ಮಾಡಿದ್ದಾರೆ.

"ನನ್ನ ಮಗ ತಪ್ಪು ಮಾಡಿದ್ದರೆ ನಿಮ್ಮ ಮಕ್ಕಳಂತೆ ಭಾವಿಸಿ ತಿದ್ದಿಕೊಳ್ಳಲು ಅವಕಾಶ ನೀಡಿ. ಅವನ ಜೀವನದ ಜೊತೆ ಆಟವಾಡಬೇಡಿ. ತಪ್ಪೋ-ಸರಿಯೋ ಇನ್ನು ಮುಂದೆ ಅವನಿಗೆ ನಾನೇ ಬುದ್ಧಿ ಕಲಿಸುತ್ತೇನೆ. ಬೇಕಾದರೆ ನಿಮ್ಮ ಕೈ-ಕಾಲು ಹಿಡಿಯುತ್ತೇನೆ. ನನ್ನ ಮಗನಿಗೆ ಬದುಕಲು ಬಿಡಿ" ಎಂದು ನಾಗಲಿಂಗಯ್ಯ ಭಾವುಕರಾಗಿ ಮನವಿ ಮಾಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸೇವೆಗೆ ಗೌರವ: ಶ್ರೀಮತಿ ಅನ್ನಪೂರ್ಣ ಎಸ್. ಬಾನರ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ.ಹೊಕ್ರಾಣಿ ಗ್ರಾಮದ ಅಶ್ವಿನಿ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು: ನರಸಿಂಹಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್ 103 ರನ್ ನಿಂದ ಗೆದ್ದ ಇಂಗ್ಲೆಂಡ್ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ರಾಜ್ಯ ಸಚಿವ ಸಂಪುಟ ಶಿಫಾರಸು500 ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ಎಡಿಬಿ ನೆರವು : ಮಹತ್ವದ ಒಪ್ಪಂದಕ್ಕೆ ಸಹಿಲೀಡ್ಸ್ ಟೆಸ್ಟ್ : ಇನ್ನಿಂಗ್ಸ್ ಗೆಲುವಿನತ್ತ ಇಂಗ್ಲೆಂಡ್ ಹಿರಿಯ ಬಹುಭಾಷಾ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನಿಲ್ಲ ಸಿಎಂ ಕುರ್ಚಿ ಬಿಟ್ಟು ಸಿದ್ದರಾಮಯ್ಯ ಜತೆ ಲಾಸ್ಟ್ ಬೆಂಚ್ ನಲ್ಲಿ ಕುಳಿದ ಡಿಕೆಶಿ : ಸದನದಲ್ಲೊಂದು ಅಪರೂಪದ ಸನ್ನಿವೇಶಕುಲದೀಪ ತಂಡದ ಪ್ರಮುಖ ಬೊಲರ್ :ಬಹುತಲೆ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಕಪ್ಪು ಟೀ ಶರ್ಟ್ ಧರಿಸಿ ವಿಧಾನಸಭೆಗೆ ನುಗ್ಗಿದ ಬಿಜೆಪಿ-ಜೆಡಿಎಸ್ ಶಾಸಕರು