LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ : ದರ್ಚುಲಾದಲ್ಲಿ ಬಾರಿ ಭೂಕುಸಿತ

Advertisement

ನವದೆಹಲಿ: ನೇಪಾಳದಲ್ಲಿ ಭಾರಿ ಪ್ರವಾಹ ಮತ್ತು ಭೂಕುಸಿತದ ಆತಂಕ ಮುಂದುವರಿದಿರುವ ನಡುವೆಯೇ, ದರ್ಚುಲಾ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ಚೌಲಾನಿ ನದಿಯ ಹರಿವಿಗೆ ಭಾಗಶಃ ಅಡ್ಡಿಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ದಿಢೀರ್ ಪ್ರವಾಹದ ಆತಂಕ ಹೆಚ್ಚಾಗಿದೆ.

ಆಪಿ ಹಿಮಾಲ್ ಗ್ರಾಮೀಣ ಪುರಸಭೆ ವ್ಯಾಪ್ತಿಯ ಭಟ್ಟಾರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ನದಿಗೆ ಕುಸಿದು ಬಿದ್ದಿವೆ. ಪರಿಣಾಮವಾಗಿ ನದಿಯ ನೀರಿನ ಹರಿವು ಅಸ್ತವ್ಯಸ್ತಗೊಂಡಿದೆ.

ಈ ಕುರಿತು ದರ್ಚುಲಾ ಜಿಲ್ಲಾ ಆಡಳಿತ ಕಚೇರಿ ಎಚ್ಚರಿಕೆ ನೀಡಿದ್ದು, ಮತ್ತಷ್ಟು ಭೂಕುಸಿತ ಸಂಭವಿಸಿದರೆ ನದಿಯ ಹರಿವು ಸಂಪೂರ್ಣವಾಗಿ ತಡೆಯಲ್ಪಡುವ ಸಾಧ್ಯತೆ ಇದೆ. ಇದರಿಂದ ನೀರು ಏಕಾಏಕಿ ಹರಿದುಬಂದು ಕೆಳಭಾಗದಲ್ಲಿ ಭೀಕರ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ತಿಳಿಸಿದೆ.

ನದಿಯ ದಡದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಅಪಾಯದ ಪ್ರದೇಶಗಳಲ್ಲಿರುವ ಜನರಿಗೆ ಮಾಹಿತಿ ನೀಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ 7 ವಿಕೆಟ್ ಗಳ ಜಯಗದೆ ಹಿಡಿದು ಭೀಮನಾದ ಅಬಕಾರಿ ಸಚಿವ: ಡೈಲಾಗ್​​ ಕೇಳಿ ಪ್ರೇಕ್ಷಕರು ಫಿದಾ ಮಿಸ್ ವರ್ಲ್ಡ್ 2026' ಕಿರೀಟ ಮುಡಿಗೇರಿಸಿಕೊಂಡ ಜೊಹೆರಿ ಮೋಲಾಸಾಂಬಾರ್ ವಿಚಾರಕ್ಕೆ ಅಕ್ಕ-ತಂಗಿ ನಡುವೆ ಜಗಳ : ವಿದ್ಯಾರ್ಥಿನಿ ನೇಣಿಗೆ ಶರಣು!ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ 1700 ಕೋಟಿ ದೇಣಿಗೆ : ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಹಣ ಪಾವತಿ ಯುವತಿ ಹೊಟ್ಟೆಯಲ್ಲಿ 1.16 ಕೆಜಿ ಕೂದಲು : ತನ್ನ ಕೂದಲನ್ನೇ ತಿನ್ನುತ್ತಿದ್ದ ಯುವತಿ ದುಲಿಪ್ ಟ್ರೋಫಿ ಪೈನಲ್: ಸೂರ್ಯವಂಸಿಗೆ ಮತ್ತೊಂದು ಅಗ್ನಿ ಪರೀಕ್ಷೆ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಪೋಕ್ಸೊ ಪ್ರಕರಣ ದಾಖಲುಮುಂಗಾರು ಮಳೆ ಕೈಕೊಡಲಿದ್ದು, ಜನಸಾಮಾನ್ಯರು ಅನ್ನ-ನೀರಿಗೆ ತತ್ವಾರ : ಕೋಡಿ ಶ್ರೀ ಭವಿಷ್ಯ ಮಾಸಾಂತ್ಯಕ್ಕೆ 200 ತಾಲೂಕುಗಳು ಬರಪೀಡಿತ ಘೋಷಣೆ: ಸಚಿವ ಖಂಡ್ರೆ