Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆತ್ತ ತಾಯಿಯನ್ನ ಮುನವಳ್ಳಿ ಹೊರವಲಯದಲ್ಲಿ ಬಿಟ್ಟು ಹೋದ ರಾಮದುರ್ಗದ ಕಿರಾತಕ 

Advertisement

ಬೆಳಗಾವಿ: ಹೆತ್ತ ತಾಯಿಗಿಂತ ದೊಡ್ಡ ದೇವರಿಲ್ಲ ಎನ್ನುವ ಕಾಲದಲ್ಲಿ, ಜನ್ಮ ನೀಡಿದ ತಾಯಿಯನ್ನೇ ಅನಾಥೆಯಂತೆ ನಿರ್ಜನ ಪ್ರದೇಶದಲ್ಲಿ ಬಿಟ್ಟು ಮಗನೊಬ್ಬ ಪರಾರಿಯಾಗಿರುವ ಕರುಳು ಹಿಂಡುವ ಘಟನೆ ಬೆಳಗಾವಿ (Belagavi Shocker) ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ತಾಯಿಯನ್ನು ಮಗನೇ ರಾತ್ರೋರಾತ್ರಿ ಕಾಡಿಗೆ ತಂದು ಬಿಟ್ಟು ಹೋಗುವ ಮೂಲಕ ಮಾನವೀಯತೆಯನ್ನೇ ಮರೆತು ಕ್ರೌರ್ಯ ಮೆರೆದಿದ್ದಾನೆ.

ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ಎಂಬುವವರೇ ಈ ದುರ್ದೈವಿ ವೃದ್ಧೆ. ಇವರ ಸ್ವಂತ ಮಗ ಸಂತೋಷ ಕಟ್ಟಿ ಎಂಬಾತನೇ ಈ ಅಮಾನವೀಯ ಕೃತ್ಯ ಎಸಗಿದ ಪಾಪಿಯಾಗಿದ್ದಾನೆ.

ನಿನ್ನೆ ರಾತ್ರಿ ಸುಮಾರು 10 ಗಂಟೆಯ ಕತ್ತಲಲ್ಲಿ ಕಮಲಮ್ಮ ಅವರನ್ನು ಮುನವಳ್ಳಿ ಜಲಾಶಯದ ಸಮೀಪವಿರುವ ನಿರ್ಜನ ಗುಡ್ಡಗಾಡು ಪ್ರದೇಶಕ್ಕೆ ಕರೆತಂದಿರುವ ಸಂತೋಷ್, ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಮುಂಜಾನೆ ಗುಡ್ಡದ ಬಳಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧೆ, ತನ್ನ ನೋವನ್ನು ನೆನೆದು ಕಣ್ಣೀರಿಡುತ್ತಾ ದಾರಿಹೋಕರ ಮುಂದೆ ಅಳಲು ತೋಡಿಕೊಂಡಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

ವಿಶೇಷವೆಂದರೆ, ತಾಯಿಯನ್ನು ಅನಾಥೆಯನ್ನಾಗಿಸಿದ ಸಂತೋಷ ಕಟ್ಟಿ ಬೇರೆಲ್ಲೂ ಅಲ್ಲ, ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿಯ (KSRTC) ಸಂಕೇಶ್ವರ ಡಿಪೋದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಸಮಾಜದಲ್ಲಿ ಜವಾಬ್ದಾರಿಯುತ ಕೆಲಸದಲ್ಲಿರುವ ವ್ಯಕ್ತಿಯೊಬ್ಬನೇ ಹೆತ್ತ ತಾಯಿಗೆ ಈ ಗತಿ ತಂದಿರುವುದನ್ನು ಕೇಳಿ ಮುನವಳ್ಳಿಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಸ್ಥಳೀಯರೇ ಮಾನವೀಯತೆಯಿಂದ ಮುಂದು ಬಂದು ವೃದ್ಧೆಗೆ ಕುಡಿಯಲು ನೀರು, ಆಹಾರ ನೀಡಿ ತಾತ್ಕಾಲಿಕವಾಗಿ ಆರೈಕೆ ಮಾಡಿದ್ದಾರೆ. ವಯಸ್ಸಾದ ತಾಯಿಯನ್ನು ಸಾಕೋದು ಬೇಡವೆಂದು ಕಾಡಿಗೆ ತಳ್ಳಿದ ಮಗನ ವಿರುದ್ಧ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಸಹಾಯಕ ವೃದ್ಧೆಗೆ ಸರ್ಕಾರದಿಂದ ಸೂಕ್ತ ಆಶ್ರಯ ಹಾಗೂ ನೆರವು ಕೊಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಸಂಜೆ 4.05ಕ್ಕೆ ರಾಜ್ಯದ ನೂತನ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪಟ್ಟಾಭಿಷೇಕಇಂದು ಬೆಳಗ್ಗೆ 10 ಗಂಟೆ ಸಚಿವರ ಪಟ್ಟಿ ಬಿಡುಗಡೆ : ಡಿ. ಕೆ ಶಿವಕುಮಾರ್ ಸಿದ್ದರಾಮಯ್ಯರಿಗೆ ಅತ್ಯುನ್ನತ ಜವಾಬ್ದಾರಿ ನೀಡಿದ ಕಾಂಗ್ರೆಸ್ ಹೈಕಮಾಂಡ್ ಹೆತ್ತ ತಾಯಿಯನ್ನ ಮುನವಳ್ಳಿ ಹೊರವಲಯದಲ್ಲಿ ಬಿಟ್ಟು ಹೋದ ರಾಮದುರ್ಗದ ಕಿರಾತಕ ಪಾಕ್ ತಂಡಕ್ಕೆ ೨೩೨ ರನ್‌ಗಳ ಗೆಲುವಿನ ಗುರಿಜೂನ್ ೬ ರಂದು ಅಪಘಾನಿಸ್ತಾನ್ ವಿರುದ್ಧ ಏಕೈಕ ಟೆಸ್ಟ್ಸಾಯಿರಾಜ್ ಬಹುತಲೇ ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್ನಾಳೆ ಸಂಜೆ ಡಿ. ಕೆ ಶಿವಕುಮಾರ್ ಪ್ರಮಾಣವಚನ : ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆಬೆಳಗಾವಿ ‘ಬಿಸಿ ತುಪ್ಪ’: ಡಿಕೆಶಿ ಸಂಪುಟ ಸರ್ಕಸ್‌ಗೆ ಗಡಿ ಜಿಲ್ಲೆಯದ್ದೇ ಟೆನ್ಷನ್!ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಮತ್ತಷ್ಟು ಸರಳೀಕರಣಗೊಳಿಸಿದ ರಾಜ್ಯ ಸರ್ಕಾರ