ಕಲಾದಗಿ: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಶಿಕ್ಷಣದ ಪ್ರಮುಖ ಅಂಗಗಳಾಗಿವೆ ಎಂದು ಚಿಕ್ಕಾಲಗುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಬಂಗಾರಿ ಹೇಳಿದರು.
ಸ್ಥಳೀಯ ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜುಗಳಲ್ಲಿ ಪಠ್ಯದ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು’ ಎಂದರು.
ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಪರೀಕ್ಷೆಗಾಗಿ ಅಲ್ಲ,ಜೀವನ ರೂಪಿಸಿಕೊಳ್ಳುವ ಸಾಧನವಾಗಿ ಪರಿಗಣಿಸಬೇಕು ಎಂದರು.
ಉಪನ್ಯಾಸಕ ಎಸ್. ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಶಂಕರ ನಿಂಬರಗಿ ಗುರುಲಿಂಗೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್. ವಿ. ಲಮಾಣಿ, ಉಪನ್ಯಾಸಕರಾದ ಬಿ.ಎಲ್.ವಾಸನದ, ಎಮ್. ವಿ. ಪರುಶೆಟ್ಟಿ, ಎಸ್.ಎಸ್. ದಿಬ್ಬದಮಣಿ ಇದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕೀರ್ತಿ ತೋಟದ ನಿರೂಪಿಸಿದರು. ಮೇಘಾ ಪೂಜಾರಿ ಸ್ವಾಗತಿಸಿದರು, ಸಾವಿತ್ರಿ ಶಿವನಿಚ್ಚಿ ವಂದಿಸಿದರು.
ವರದಿ : ಬಸವರಾಜ ಪೂಜಾರಿ


