ಸೇಡಂ : ತಾಲೂಕಿನ ಮೋತಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಶಕಲಾಸಪಲ್ಲಿ ಗ್ರಾಮದಲ್ಲಿ ಸೂಮಾರು 5 ವರುಷದಿಂದ ಬಹಳಷ್ಟು ಮನೆಗಳಿಗೆ ನೀರು ನಳಗಳ ಸರಬರಾಜು ಇಲ್ಲದಂತಾಗಿದೆ.
ಅಲ್ಪಸ್ವಲ್ಪ ಬರುತ್ತಿರುವ ನೀರಿನಲ್ಲಿ 2 ರೀತಿಯ ಮಿಶ್ರಣ ನೀರು ಕುಡಿಯುತ್ತಿದ್ದಾರೆ.

ಈಶ್ವರ ದೇವಸ್ಥಾನ ಹತ್ತಿರ ಬಾವಿಯಲ್ಲಿ ಬೋರ್ ವೆಲ್ ನೀರು ಬಿಡುವುದು ಮತ್ತು ಬಾವಿಯ ನೀರು ಸೇರಿ ಜನಗಳಿಗೆ ಸಿಗುತ್ತವೆ ಇದರಿಂದ ಜನರಿಗೆ ರೋಗಾಣುಗಳು ಉಂಟಾಗುತ್ತವೆ ಇದರ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ನೀರಿನ ಸಮಸ್ಯೆ ತುಂಬಾ ಇದೆ ಎಂದು ಗ್ರಾಮಸ್ಥರು ಎಷ್ಟೇ ಕರೆ ಮಾಡಿದರು ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ ಇಲ್ಲ ಸಲ್ಲದ ನೆಪ ಹೇಳುತ್ತಿದ್ದಾರೆ.
ಮಾನ್ಯ ಶಾಸಕರು ಹಾಗೂ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಈ ಹಿಂದೆ ಸಭೆಯಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು ಹಾಗೂ ಆಯಾ ಗ್ರಾಮ ಪಂಚಾಯತ್ ಒಳಪಡುವ ಅಧಿಕಾರಿಗಳದ್ದೇ ಜವಾಬ್ದಾರಿ ಎಂದು ಹೇಳಿದರು ಹಾಗೆ ನೀರಿನ ಸಮಸ್ಯೆ ಅಂತ ಕಂಡುಬಂದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಹೇಳಿದರು.
ಅದರೆ ಈ ಶಕಲಾಸಪಲ್ಲಿ ಗ್ರಾಮದಲ್ಲಿ ವರುಷಗಳು ಕಳೆದರು ಕುಡಿಯುವುದಕ್ಕೆ ನೀರು ಇಲ್ಲ ಎಂದು ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ. ನಮ್ಮ ಗೋಳು ಕೇಳುವವರಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸಚಿವರು ಹಾಗೂ ಶಾಸಕರಾದ ಡಾ. ಶರಣಪ್ರಕಾಶ್ ಪಾಟೀಲ್ ಕೊಟ್ಟ ಮಾತಿಗೆ ಬದ್ಧರಾಗುವರೆ.? ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಅಮಾನತು ಮಾಡುವರೇ.? ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುವಿರಾ ಸಮಸ್ಯೆ ಯಾವಾಗ ಪರಿಹಾರ ಎಂದು ಗ್ರಾಮದ ಮುಖಂಡರಾದ ಚಂದ್ರಶೇಖರ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.

