ಮಾನ್ವಿ: ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಮದರ್ ತೆರೇಸಾ ರವರ ಜನ್ಮದಿನ ಅಂಗವಾಗಿ ಹಿರಿಯ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಮದರ್ ತೆರೇಸಾ ರವರು ಮಹಿಳಾ ಸಬಲೀಕರಣದಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎನ್ನುವ ಆಶಯವನ್ನು ಹೊಂದಿದ್ದರು. ಹಸಿದವರಿಗೆ ಅನ್ನ ನಿರಾಶ್ರಿತರಿಗೆ ನೆಲೆ ಹಾಗೂ ಶಾಂತಿಯನ್ನು ಕಲ್ಪಿಸುವದಕ್ಕಾಗಿ ಅವರು ಶ್ರಮಿಸಿದರು.
ಸರ್ವಧರ್ಮ ಸಮಾಜಸೇವಕ ಹಾಗೂ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಹನುಮಂತ ಕೋಟೆರವರು ವಿದ್ಯಾರ್ಥಿಗಳಿಗೆ ನೋಟ್ಬುಕ್ ಬ್ಯಾಗ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.
ಕಾಲೇಜಿನ ಪ್ರಾಚಾರ್ಯ ನಾಗಮಲ್ಲೇಶ್ ಜಿ. ಉಪ ಪ್ರಾಚಾರ್ಯ ಸುಧಾಕರ್ ಸಂಜೀವ್ ಹಿರಿಯ ಹೋರಾಟಗಾರ ಈರೇಶ್ ಹುಲಗುಂಚಿ, ಮಹಿಳಾ ಸಬಲೀಕರಣ ರಾಜ್ಯಾಧ್ಯಕ್ಷೆ ಹುಜಾರಾಣಿ ಶರಣು ಮುದ್ದಮಗುಡ್ಡಿ ಕರಿಯಪ್ಪ ಸಹರಾ ಬೇಗಂ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ :ಆಂಜನೇಯ ನಸಲಾಪುರ


