ಬರ್ಮಿಂಗ್ಹ್ಯಾA(ಇAಗ್ಲೆAಡ್): ಟ್ವೆಂಟಿ-೨೦ ಪಂದ್ಯಗಳ ಸರಣಿಯಲ್ಲಿ ೦-೪ ರಿಂದ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ತಂಡವು ನಾಳೆಯಿಂದ ಆರಂಭವಾಗುವ ಏಕದಿನ ಸರಣಿಗೆ ಗೆಲುವಿನ ತವಕದಲ್ಲಿ ಕಣಕ್ಕೆ ಇಳಿಯಲಿದೆ.
ಇಲ್ಲಿನ ಎಜಬಾಸ್ಟನ್ ಕ್ರೀಡಾಂಗಣದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೩:೩೦ ಕ್ಕೆ ಆರಂಭವಾಗಲಿದೆ. ಹೊಸ ತಂಡ ಹೊಸ ಆಶಾಭಾವನೆಯೊಂದಿಗೆ ನಾಳೆ ಸುಭಮಾನ್ ಗಿಲ್ ನಾಯಕತ್ವದ ಭಾರತ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಇಂಗ್ಲೆAಡ್ ತಂಡವನ್ನು ಎದುರಿಸಲಿದೆ.
ಏಕದಿನ ಸರಣಿ ಆಗಿರುವುದರಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಸುಭಮಾನ್ ಗಿಲ್ ತಂಡವನ್ನು ಮುನ್ನಡೆಸುವರು. ಟ್ವೆಂಟಿ-೨೦ ತಂಡದ ನಾಯಕ ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಹಾಗೂ ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ಮಧ್ಯಮ ಕ್ರಮಾಂಕವನ್ನು ಬಲಪಡಿಸಲಿದ್ದಾರೆ.
ಇಂಗ್ಲೆAಡ್ ತಂಡಕ್ಕೆ ಜೋ ರೂಟ್ ತಂಡಕ್ಕೆ ಬಂದಿದ್ದು, ಬೆನ್ ಡಕೆಟ್ ಹಾಗೂ ವೀಲ್ ಜಾಕ್ಸ್ ಮಾಮೂಲಿನಂತೆ ಏಕದಿನ ತಂಡಕ್ಕೆ ಮರಳಿದ್ದಾರೆ.


