Ad imageAd image

ಕಕ್ಷಿದಾರರು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಮೂಲಕ ದುಂದು ವೆಚ್ಚವನ್ನು ಕಡಿಮೆ ಮಾಡಿಕೊಳ್ಳಿ: ನ್ಯಾಯಾಧೀಶೆ. ಭಾರತಿ .ಎಂ

Bharath Vaibhav
ಕಕ್ಷಿದಾರರು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಮೂಲಕ ದುಂದು ವೆಚ್ಚವನ್ನು ಕಡಿಮೆ ಮಾಡಿಕೊಳ್ಳಿ: ನ್ಯಾಯಾಧೀಶೆ. ಭಾರತಿ .ಎಂ
WhatsApp Group Join Now
Telegram Group Join Now

ಬಾಗೆಪಲ್ಲಿ: ಮಾರ್ಚ್ 8 ನಡೆಯುವಂತಹ ಲೋಕ ಅದಾಲತ್ ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಗೌರವಾನ್ವಿತ ಭಾರತಿ .ಎಂ
ತಿಳಿಸಿದರು.

ನ್ಯಾಯಾಲಯದಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾರ್ಚ್ 8 ನಡೆಯುವ ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು
ರಾಜಿಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಕ್ಷಿದಾರರು ನ್ಯಾಯಾಲಯದಲ್ಲಿ ಹೂಡಿರುವಂತಹ ವಿಭಾಗಕ್ಕಾಗಿ ಹಾಕಿರುವ ದಾವೆ, ವೈವಾಹಿಕ ಜೀವನಕ್ಕಾಗಿ ಸಲ್ಲಿಸಿರುವ ದಾವೇ , ಚೆಕ್ಅಮಾನ್ಯ ಪ್ರಕರಣ, ಮೋಟಾರ್ ವಾಹನ ಕಾಯ್ದೆ, ರಾಜಿ ಆಗಬಲ್ಲ ಪ್ರಕರಣಗಳು ಮತ್ತು ರಾಜಿ ಮಾಡಿಕೊಳ್ಳಲಾಗುವ ಪ್ರಕರಣಗಳನ್ನು
ರಾಜಿ ಮಾಡಿಕೊಂಡು ಕಕ್ಷಿದಾರರು ಶುಲ್ಕ, ವಕೀಲರ ಶುಲ್ಕ, ಇತರ ವೆಚ್ಚಗಳನ್ನು ಕಡಿಮೆ ಮಾಡಿಕೊಂಡು ಪ್ರಕರಣಗಳನ್ನು ರಾಜಿ ಮಾಡಿಕೊಂಡು ಸುಖಮಯವಾದಂತಹ ಜೀವನವನ್ನು ನಡೆಸಲು ತಿಳಿಸಿದರು.

ಅಲ್ಲದೇ ಸಾರ್ವಜನಿಕರಿಗೆ ನ್ಯಾಯಾಲಯದ ಸುತ್ತ ಸುತ್ತುವಂತಹ ಅವಶ್ಯಕತೆ ಬರುವುದಿಲ್ಲ ಸಮಯ ವೆಚ್ಚ ಇತರೆ ಖರ್ಚುಗಳು ಕಡಿಮೆ ಆಗಬಹುದು ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಕ ಕ್ಷಿದಾರರು ಮತ್ತು ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ಮಾರ್ಚ್ 8 ನಡೆಯುವಂತಹ
ಲೋಕ್ ಅದಾಲತ್ ನಡೆಯಲಿದ್ದು, ಎಲ್ಲಾ ನ್ಯಾಯಾಲಯಗಳು ಸಹ ಲೋಕದ ಆಯೋಜನೆ ಮಾಡಲಾಗಿದೆ ಅದರಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸುಖಮಯವಾದ ಜೀವನ ಮತ್ತು ನ್ಯಾಯಾಲಯ ಸುತ್ತ ಸುತ್ತುವಂತಹ ಸಮಸ್ಯೆಯನ್ನ ಕಡಿಮೆ ಮಾಡಿಕೊಳ್ಳಬಹುದೇ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ಅಥವಾ ವಕೀಲರಿಗೆ ಸಲ್ಲಿಸಬೇಕಾಗಿರುವಂತ ಶುಲ್ಕವು ಸಹ ವಿನಾಯಿತಿ ಮತ್ತು ಶುಲ್ಕ ರಹಿತವಾಗಿರುತ್ತದೆ. ಮತ್ತು ತಾವು ಕಟ್ಟಿರುವಂತಹ ನ್ಯಾಯಾಲಯದ ಶುಲ್ಕವು ಸಹ ಖರ್ಚು ಸಹ ವಾಪಸ್ ನಿಮಗೆ ಬರುತ್ತದೆ ಎಂದು ತಿಳಿಸಿದರು.

ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಹಾಗೂ ಹಿರಿಯ ಕಿರಿಯ ಎಲ್ಲಾ ವಕೀಲರ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ದಾವೆ, ಪ್ರಕರಣಗಳನ್ನು
ಬಾಗೇಪಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ರಾಜಿ ಮಾಡಿಸಿ ಜಿಲ್ಲೆಯಲ್ಲಿಯೇ ಹೆಸರನ್ನು ಪಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮಂಜುನಾಥ ಚಾರಿ ಮಾತನಾಡಿದರು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಬಾಗೇಪಲ್ಲಿ ಅಭಿವೃದ್ಧಿಗಾಗಿ ತಾವು ಸಹ ಸಹಕಾರ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಎ ನಂಜುಂಡಪ್ಪ, ಹಿರಿಯ ವಕೀಲರಾದ ಅಲ್ಲಾಭಕಾಶ್, ನಂಜಪ್ಪ ಸತ್ಯನಾರಾಯಣರಾವ್ ಫಯಾಜ್ ಬಾಷಾ ,
ಜೆಎನ್ ಮಂಜುನಾಥ,
ಟಿಎಲ್ ರಾಮಾಂಜನೇಯ, ನರೇಂದ್ರಬಾಬು, ಕರ್ಣಸಾಗರ ರೆಡ್ಡಿ ಅಪ್ಪು ಸ್ವಾಮಿ, ಗುರುನಾಥ್ , ವಿ.ನಾರಾಯಣ, ಮುಸ್ತಾಕ್ ಅಹಮದ್, ಮಹೇಶಪ್ಪ, ಶಿವಣ್ಣ, ಸತೀಶ್ ,ನಾಗಭೂಷಣ, ಅರುಣ ಜಿಕೆ ,ಮಮತಾ ,ಬಿಂದು, ಬಾಲ ಸರಸ್ವತಿ, ಆದಿ ,ಶ್ರೀನಾಥ್, ಆನಂದ್ ಇತರ ವಕೀಲರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
Share This Article
error: Content is protected !!