Ad imageAd image

ಬಸವಣ್ಣನವರ 893ನೇ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ

Bharath Vaibhav
ಬಸವಣ್ಣನವರ 893ನೇ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಔರಾದ : ಔರಾದ ಪಟ್ಟಣದ ತಹಸಿಲ್ ಕಛೇರಿಯಲ್ಲಿ ಬಸವ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆಮಾಡಿ ಸಾಂಸ್ಕೃತಿಕ ನಾಯಕ ಬಸವಣ್ಣನವರ 893 ನೇ ಜಯಂತಿ ಅದ್ದೂರಿ ಯಾಗಿ ಆಚರಿಸುವಂತೆ ಚರ್ಚಿಸಲಾಯಿತು. ಅದೇರೀತಿ
ಪಟ್ಟಣದಲ್ಲಿ ದಿ 19 ರಂದು ಸಾಯಂಕಾಲ 5 ಗಂಟೆಗೆ ಬಸವ ಜಯಂತಿ ನಿಮಿತ್ತ ಅದ್ದೂರಿ ಬೈಕ್ ರ್ಯಾಲಿ ಆಯೋಜಿಸಿಲಾಗಿದ್ದು ತಾಲ್ಲೂಕಿನ ಎಲ್ಲಾ ಸಮಾಜ ಬಾಂಧವರು ರ್ಯಾಲಿಯಲ್ಲಿ ಭಾಗವಹಿಸಿ ಬೈಕ್ ರ್ಯಾಲಿ ಯಶಸ್ವಿಗೊಳಿಸಬೇಕು ಹಾಗೂ ದಿನಾಂಕ 20 ರಂದು ಮುಂಜಾನೆ 8 ಗಂಟೆಗೆ ಜರುಗುವ ಜಗಜ್ಯೋತಿ ಬಸವಣ್ಣನವರ 893 ನೇ ಜಯಂತಿಯನ್ನು ತಾಲ್ಲೂಕು ಆಡಳಿತ ವತಿಯಿಂದ ಅದ್ದೂರಿಯಾಗಿ ಆಚರಿಸುತ್ತಿದ್ದು.

ಆದಕಾರಣ ಪಟ್ಟಣದ ಬಸವೇಶ್ವರ ವೃತ್ತ ದಿಂದ ಭ್ಯವ ಮೇರವಣಿಗೆಯೊಂದಿಗೆ ತಹಸಿಲ್ ಕಾರ್ಯಲಯದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಆದರಿಂದ ಬಸವ ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಜಯಂತಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ತಹಶಿಲ್ದಾರ ಮಹೇಶ ಪಾಟೀಲ್ ಮನವಿ ಮಾಡಿದರು ಈ ಸಂದರ್ಭದಲ್ಲಿ ಮುಖಂಡರಾದ ಬಂಡೆಪ್ಪಾ ಕಂಟೆ,ರವಿ ಮೀಸೆ,ರಾಮಣ್ಣಾ ವಡೆಯಾರ,ಡಾ ವೈಜಿನಾಥ ಬುಟ್ಟೆ,ಚಂದ್ರಕಾಂತ ಘುಳೆ,ಶರಣಪ್ಪಾ ಪಾಟೀಲ, ಮಲ್ಲಿಕಾರ್ಜುನ ಟಂಕಸಾಲೆ,ವೀರೇಶ ಅಲಮಾಜೆ,ಆನಂದ ದ್ಯಾಡೆ,ಅಂಬಾದಾಸ ನಳಗೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!