Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ತಿಂಗಳಲ್ಲಿ ಬಗೆಹರಿಯುತ್ತದೆ : ಕೆ.ಹೆಚ್. ಮುನಿಯಪ್ಪ 

Advertisement

ಬೆಂಗಳೂರು : ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ವಿಚಾರ ತಿಂಗಳಲ್ಲಿ ಬಗೆಹರಿಯುತ್ತದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಂಪುಟ, ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ.

ತಿಂಗಳಲ್ಲಿ ಬಗೆಹರಿಯುತ್ತದೆ. ಮುಂದುವರಿಯುತ್ತಾರಾ?. ಬದಲಾಗುತ್ತಾರಾ ಅವರೇ ತಿಳಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ನಿನ್ನೆ ನಡೆದ ಎಸ್​​ಐಆರ್ ಸಂಬಂಧ ಸಿಎಂ ಸಭೆ ವಿಚಾರವಾಗಿ ಮಾತನಾಡಿ, ಇಡೀ‌ ದೇಶದಲ್ಲಿ ಗೊಂದಲ ಇದೆ. ಸಂಘ ಸಂಸ್ಥೆಗಳ ಜೊತೆ ನಿನ್ನೆ ಸಭೆ ಆಗಿದೆ. ದುರುಪಯೋಗ, ತಡೆಗಟ್ಟುವಿಕೆ ಬಗ್ಗೆ ಚರ್ಚೆ ಆಯ್ತು. ಮತಗಳನ್ನು ತೆಗೆಯುವಂತದ್ದು ಇಡೀ‌ ದೇಶದಲ್ಲಿ‌ ಸಂಶಯಾಸ್ಪದ ಮೂಡಿಸುತ್ತದೆ.

 

ಮತಪಟ್ಟಿ ಪರಿಷ್ಕರಣೆ ಆಗಲಿ, ಬೇಡ ಅನ್ನುವುದಿಲ್ಲ. ಬೇಕು ಅನ್ನೋರನ್ನು ಉಳಿಸುವುದು, ಬೇಡ ಅನ್ನೋರನ್ನು ತೆಗೆಯುವುದು ಆಗ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಆಗಲಿ. ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು.

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸರ್ಕಸ್ ವಿಚಾರವಾಗಿ ಮಾತನಾಡಿ, ಸರ್ಕಾರ ರಚನೆಗೆ ಅವಕಾಶ ಕೊಡಬೇಕು. ನಂತರ ಬಹುಮತ ಸಾಬೀತು ಪಡಿಸಬಹುದು. ರಾಜ್ಯಪಾಲರು ಅನುಮತಿ‌ ಕೊಟ್ಟರೆ ಸಂವಿಧಾನಕ್ಕೆ ಗೌರವ ಕೊಟ್ಟಂತೆ ಆಗುತ್ತದೆ. ಇದು ಸಂವಿಧಾನಕ್ಕೆ ಅಪಮಾನ ಮಾಡಿದ ಹಾಗೆ. ಒಂದು ವಾರ 15 ದಿನಗಳ ಕಾಲ ಅವಕಾಶ ಕೊಡಬೇಕು. ಜನರಿಗೆ ಅಪಮಾನ ಮಾಡಿದ ರೀತಿ ಆಗುತ್ತದೆ ಎಂದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರದಕ್ಷಿಣೆ ಕಿರುಕುಳ : ದೇಶದ 19 ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ತಿಂಗಳಲ್ಲಿ ಬಗೆಹರಿಯುತ್ತದೆ : ಕೆ.ಹೆಚ್. ಮುನಿಯಪ್ಪ ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಕುಟುಂಬ ಐವರ ಮೇಲೆ ಆಸಿಡ್ ದಾಳಿಕೈಗಾರಿಕೆ ಸ್ಥಾಪಿಸಲು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ : ಕುಮಾರಣ್ಣ ಬೇಸರ98ರ ವೃದ್ಧನ ಕಾಲಿಗೆ ಬಿದ್ದ ನರೇಂದ್ರ ಮೋದಿ : ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳ ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ : ಇಬ್ಬರು ಅರೆಸ್ಟ್ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಹಿಂದೂ ಯುವತಿ ಮೇಲೆ ದೌರ್ಜನ್ಯ - ಆಕ್ರೋಶಯಾದಗಿರಿ ಲೋಕಾಯುಕ್ತದ 'ಮಿಂಚಿನ ದಾಳಿ': ಲಕ್ಷದ ಲಂಚದೊಂದಿಗೆ ಗುರುಮಠಕಲ್ ಪಿಐ ಅರೆಸ್ಟ್!ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸುರೇಶ್ ನಾಯಕ ಒತ್ತಾಯ!