LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರಡಿ ದಾಳಿಗೆ ರೈತ ಬಲಿ 

Advertisement

ಕಲಘಟಗಿ :ತಾಲೂಕಿನ ಬೆಂಡಲಗಟ್ಟಿ ಗ್ರಾಮದ ರೈತನೊಬ್ಬ ಕಬ್ಬಿನ ಹೊಲಕ್ಕೆ ಹೋದಾಗ ಹಠಾತ್ ಕರಡಿ ದಾಳಿ ಮಾಡಿದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮದ್ಯಾಹ್ನ ಜರುಗಿದೆ.

news_1786200755_0_769.webp

 

ಘಟನೆಯಲ್ಲಿ ಬೆಂಡಲಗಟ್ಟಿ ಗ್ರಾಮದ ಶಂಕ್ರಪ್ಪ ಪರಸಪ್ಪ ಲಮಾಣಿ (52) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ರೈತ ಶನಿವಾರ ಬೆಳೆಗ್ಗೆ ತಮ್ಮ ಕಬ್ಬಿನ ಹೊಲಕ್ಕೆ ಕೂಲಿ ಮಾಡಲೆಂದು ಹೋದವೇಳೆ 
 ಮದ್ಯಾಹ್ನದ ವೇಳೆ ಹಟಾತ್ತನೆ ಕರಡಿ ದಾಳಿ ಮಾಡಿದೆ. ಈ ವೇಳೆ ಗಾಯಗೊಂಡ ರೈತ ಕಿರುಚಾಡುತ್ತಿರುವಾಗ ಘಟನಾ ಸ್ಥಳಕ್ಕೆ ಪಕ್ಕದ ಹೊಲದಲ್ಲಿನ ರೈತರು ಬರುತ್ತಿದ್ದಂತೆ ಕರಡಿ ಅಲ್ಲಿಂದ ಓಡಿ ಹೋಗಿದೆ. ಅಲ್ಲಿಂದ ಆಸ್ಪತ್ರೆಗೆ ಕೊಂಡೋಯ್ಯಬೇಕು ಎನ್ನುವಷ್ಟರಲ್ಲಿಯೇ ರೈತ ಮೃತ ಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿ.ಪಿ.ಐ ಶ್ರೀಶೈಲ ಕೌಜಲಗಿ ಹಾಗೂ ಡಿ.ಎಪ್.ಓ ಅಲೀಮ್ ಸಿದ್ದಿಕಿ, ಆರ್.ಎಪ್ ಓ ಅರುಣಕುಮಾರ ಅಷ್ಠಗಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

 ಡಿ.ಎಪ್ ಓ ಅಲೀಮ್ ಸಿದ್ದಿಕಿ ಮಾತನಾಡಿ, ಕರಡಿ ದಾಳಿಗೆ ರೈತನಿಗೆ ಘಾಯಗಳ ಹೆಚ್ಚಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ತನಿಖೆ ಕೈಗೊಂಡು ಮೃತ ರೈತನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST