ಕಲಾದಗಿ : ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ಕತ್ತಲ್ ರಾತ್ರಿಯ ವೇಳೆ ಹೆಬ್ಬಳ್ಳಿ ಅಜ್ಜ ಭವಿಷ್ಯ ನುಡಿದರು.
ಪ್ರತಿವರ್ಷದಂತೆ ಈ ವರ್ಷವೂ ಅಜ್ಜನವರ ಭವಿಷ್ಯ ಕೇಳಲು ಭಕ್ತರು ಹಾಗೂ ಸಾರ್ವಜನಿಕ ಸಮೂಹ ತುಂಬಾ ಕುತೂಹಲ ಮೂಡಿರುತ್ತದೆ.
ಈ ವರ್ಷದ ಭವಿಷ್ಯವಾಣಿಯಲ್ಲಿ ಮೂಡನ ಹಾಗೂ ಪಡುವಣ ದಿಕ್ಕಿಗೆ ಬರದ ಛಾಯಾ ಮೂಡಿಸುತ್ತದೆ, ಪ್ರಾಣಿಗಳ ಸಾವು ನೋವು ಹೆಚ್ಚಾಗುವ ಸಾಧ್ಯತೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಸ್ತಿರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದಿನ ದಿನಮಾನಗಳು ಕಠಿಣವಾಗಿದ್ದು. ಈ ವರ್ಷ ಸುಖ - ದುಃಖ ಎರಡೂ ಮಿಶ್ರಣವಾಗಿರುತ್ತದೆ ಎಂದು ಹೆಬ್ಬಳ್ಳಿ ಅಜ್ಜ ಭವಿಷ್ಯ ನುಡಿದಿದ್ದಾರೆ.ಈ ಭವಿಷ್ಯವಾಣಿ ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆದಿದು ಮತ್ತು ಕುತೂಹಲ ಮೂಡಿಸಿತು.
ವರದಿ : ಬಸವರಾಜ ಪೂಜಾರಿ


