LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಶೀಘ್ರದಲ್ಲೇ ಜಂತರ್ ಮಂತರ್ ಸೀಸನ್ 2' ಹೋರಾಟ ಆರಂಭ : ಸಿಜಿಪಿ ಘೋಷಣೆ

Advertisement

ನವದೆಹಲಿ: ದೆಹಲಿಯಲ್ಲಿ (Delhi) ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸ್ಥಳ ಸಿಗದಿರುವುದು ಹಾಗೂ ಕೊನೆಯ ಕ್ಷಣದಲ್ಲಿ ಸಭಾಂಗಣದ ಬುಕಿಂಗ್ ರದ್ದಾಗಿರುವುದರ ಹಿಂದೆ ಆಡಳಿತಾರೂಢ ಬಿಜೆಪಿ (BJP) ಒತ್ತಡವಿದೆ ಎಂದು ಆರೋಪಿಸಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP), ಶೀಘ್ರದಲ್ಲೇ 'ಜಂತರ್ ಮಂತರ್ ಸೀಸನ್ 2' ಹೋರಾಟ ನಡೆಸುವುದಾಗಿ ಕರೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅಭಿಜೀತ್ ದಿಪ್ಕೆ (Abhijith Dipke), ಜಂತರ್ ಮಂತರ್‌ನಲ್ಲಿ ನಡೆದಿದ್ದ ಹೋರಾಟದ ಎರಡನೇ ಹಂತ ಯಾವಾಗ ಆರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ. 'ಜಂತರ್ ಮಂತರ್ ಸೀಸನ್ 2' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದರು.

ಸಭೆಗಾಗಿ ಹಲವು ಸ್ಥಳಗಳನ್ನು ಸಂಪರ್ಕಿಸಿದ್ದರೂ ಯಾರೂ ಸಭಾಂಗಣ ನೀಡಲು ಮುಂದೆ ಬರಲಿಲ್ಲ. ಎಲ್ಲರೂ ಮೇಲಿನಿಂದ ಒತ್ತಡವಿದೆ ಎಂದು ಹೇಳುತ್ತಿದ್ದರು ಎಂದು ದಿಪ್ಕೆ ಆರೋಪಿಸಿದರು. 

ಅಂತಿಮವಾಗಿ ಒಂದು ಸಭಾಂಗಣವನ್ನು ಕಾಯ್ದಿರಿಸಲಾಗಿತ್ತು. ಆದರೆ ಕಾರ್ಯಕ್ರಮದ ದಿನ ಬೆಳಗ್ಗೆಯೇ ಅದರ ಮಾಲೀಕರ ಮೇಲೂ ಒತ್ತಡ ಹೇರಲಾಗಿದೆ ಎಂದು ಅವರು ದೂರಿದರು.

CJP ಸಭೆಗೆ ಅವಕಾಶ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಭಾಂಗಣದ ಮಾಲೀಕರಿಗೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ದಿಪ್ಕೆ ಮಾಡಿದರು. 

ಈ ಎಲ್ಲ ಬೆಳವಣಿಗೆಗಳ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದ ಅವರು, ಇಂತಹ ಒತ್ತಡಗಳಿಂದ ಪಕ್ಷದ ಕಾರ್ಯಕರ್ತರನ್ನು ಹಿಂಜರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ CJP ಮಾಡಿರುವ ಆರೋಪಗಳಿಗೆ ಬಿಜೆಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಟಿ ತಂಡಕ್ಕೆ ಪಾಂಡ್ಯಾರನ್ನು ನಾಯಕರನ್ನಾಗಿ ಮಾಡಿ ಕರೆತರಲು ಪ್ರಾಂಚೈಸಿ ನಿರಾಕರಣೆಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ನೇಣಿಗೆ ಶರಣು ಕೆಎಎಸ್ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ : 5 ವರ್ಷಗಳ ವಯೋಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಭಾರತ ಡೆವಿಸ್ ಕಪ್ ಟೆನಿಸ್ ತಂಡಕ್ಕೆ ಮಾನಸ ದಾಮನೆದ್ರುವ್ ಜುರೆಲ್- ಸರಫರಾಜ್ ಖಾನ್ ನಡುವೆ ಪೈಪೋಟಿ ವೆಂಕಟೇಶ್ವರ ಪದವಿ ಮಹಾವಿದ್ಯಾಲಯ ವತಿಯಿಂದ ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಅಪಘಾನಿಸ್ತಾನ್ ತಂಡಕ್ಕೆ ಸರಣಿ ಜಯವಿಕಾಸಸೌಧದ ಕ್ಯಾಂಟೀನ್ ಮೇಲೆ ದಿಢೀರ್ ದಾಳಿ : ಪ್ಲೇಟ್‌ಗಳ ಮೇಲೆ ಫಂಗಸ್ ಪತ್ತೆ, ಕ್ಯಾಂಟೀನ್ ಬಂದ್ಯತ್ರೀಂದ ಸಿದ್ದರಾಮಯ್ಯ ಅನುಭವ ಇಲ್ಲದ ಮಂಗ : ಎ.ಎಚ್. ವಿಶ್ವನಾಥ್ಕಾಂಗರೂಗಳನ್ನು ಅವರದೇ ನೆಲದಲ್ಲಿ ೧೯೮ ರನ್‌ಗಳಿಗೆ ಆಲೌಟ್ ಮಾಡಿದ ಬಾಂಗ್ಲಾ